Breaking News

ಪರಶಿವನ ಸನ್ನಿಧಾನಕ್ಕೆ ಶತಾಯಷಿ..

ಲಿಂಗೈಕ್ಯರಾದ ಶ್ರೀಗಳು....

SHARE......LIKE......COMMENT......

ತುಮಕೂರು: 

ತಮ್ಮ ಜೀವಿತದ ಶತಮಾನ ಕಾಲ ಇಷ್ಟಲಿಂಗ ಪೂಜಿಸಿ ಆಧ್ಯಾತ್ಮದ ಔನ್ನತ್ಯ ಸಾಧಿಸಿದ ಶ್ರೀ ಶಿವಕುಮಾರ್‌ ಸ್ವಾಮೀಜಿಗಳಿಗೆ ಮಂಗಳವಾರ ಶ್ರೀಮಠದ ಆವರಣದಲ್ಲಿಯೇ ಕ್ರಿಯಾ ಸಮಾಧಿ ನೆರವೇರಿಸುವ ಮೂಲಕ, ನೆರೆದಿದ್ದ ಸಾವಿರಾರು ಭಕ್ತರು ಅವರನ್ನು ಪರಶಿವನ ಸನ್ನಿಧಾನಕ್ಕೆ ಕಳುಹಿಸಿಕೊಟ್ಟರು.

ಲಿಂಗೈಕ್ಯರಾದ ಶ್ರೀಗಳ ಪಾರ್ಥೀವ ಶರೀರವನ್ನು ಕೂರಿಸಿದ ಸಮಾಧಿಯ ಕೆಳಭಾಗದಲ್ಲಿ ವಿಭೂತಿ ಗಟ್ಟಿ ಹಾಗೂ ಮರಳು ಉಪ್ಪು ಹಾಕಲಾಯಿತು. ಶ್ರೀಗಳ ಶಿರ ಭಾಗವನ್ನು ಬಿಲ್ವಪತ್ರೆಗಳಿಂದ ಮುಚ್ಚಿ, ಪವಿತ್ರವಾದ ಮಣ್ಣು ಹಾಕಿ ಕಲ್ಲು ಹಾಸು ಹೊದಿಸಲಾಗಿತ್ತು. ದೇಹವನ್ನು ಸಾಧಾರಣ ಮಣ್ಣಿನಿಂದ ಮುಚ್ಚದೇ ವಿಭೂತಿ ಮತ್ತು ಉಪ್ಪಿನಿಂದ ಮುಚ್ಚುವುದೇ ಕ್ರಿಯಾ ಸಮಾಧಿಯ ವಿಶೇಷ. ಹಾಗಾಗಿ ಶ್ರೀಗಳ ಕ್ರಿಯಾ ಸಮಾಧಿಗೆ 300 ಬಾಕ್ಸ್‌ ವಿಭೂತಿ ಗಟ್ಟಿ, 5 ಚೀಲ ಉಪ್ಪು, ಬಿಲ್ವಪತ್ರೆ, 50 ಚೀಲ ಮರಳನ್ನು ಬಳಸಲಾಗಿದೆ. ಜತೆಗೆ ಬಿಲ್ವಪತ್ರೆ, ನಾನಾ ವಿಧದ ಹೂವುಗಳನ್ನು ಬಳಕೆ ಮಾಡಲಾಗಿದೆ. ಕ್ರಿಯಾ ಸಮಾಧಿ ಗದ್ದುಗೆ ಹೊರಗಡೆ ಹಸಿರು ಚಪ್ಪರ ನಿರ್ಮಾಣ, ಗದ್ದುಗೆ ಮಂದಿರಕ್ಕೆ ಶಿವಪಂಚಾಕ್ಷರಿ ಮಂತ್ರದ ಹೂವಿನ ಅಲಂಕಾರ ಮಾಡಲಾಗಿದೆ.

ಶ್ರೀಗಳ ಇಚ್ಚೆಯಂತೆ, ಅವರು ಬಯಸಿದ ವಾಸ್ತುವಿನ ಪ್ರಕಾರವೇ, ಅಮೃತಶಿಲೆಯಲ್ಲಿ ನಿರ್ಮಾಣಗೊಂಡಿರುವ ಕ್ರಿಯಾ ಸಮಾಧಿ ಗದ್ದುಗೆ, ಅವರು ಬದುಕಿದ್ದಾಗಲೇ ನಿರ್ಮಾಣವಾಗಿತ್ತು 1982ರಲ್ಲಿ ಕನಕಪುರದ ದೇಗುಲ ಮಠದ ಇಮ್ಮಡಿ ಮಹಾಲಿಂಗ ಸ್ವಾಮೀಜಿ ಈ ಭವನ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.

ಈಗ ಭವನ ನಿರ್ಮಿಸಲಾದ ಜಾಗದಲ್ಲಿ ಬೃಹತ್ತಾದ ಆಲದ ಮರವೊಂದು ಇತ್ತು. ಮರವನ್ನು ಕಡಿದು ಆ ಜಾಗದಲ್ಲಿ ಭವನ ನಿರ್ಮಿಸಲು ಶಿವಕುಮಾರ ಸ್ವಾಮೀಜಿ ಅವರಿಗೆ ಇಷ್ಟವಿರಲಿಲ್ಲ. ಆಶ್ಚರ್ಯ ಎನ್ನುವಂತೆ ಒಂದು ದಿನ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಆ ಆಲದ ಮರ ಧರೆಗುರುಳಿತ್ತು. ನಂತರ ಭವನ ನಿರ್ಮಾಣ ಹಾದಿ ಸುಗಮವಾಗಿತ್ತು……