ಮಾಜಿ ಸಿಎಂ ಯಡಿಯೂರಪ್ಪ ಸರ್ಕಾರದಲ್ಲಿ ಆರಂಭವಾಗಬೇಕಿದ್ದ ಈ ಮೇಲ್ಸೇತುವೆ ಕಾಮಗಾರಿ 10 ವರ್ಷಗಳ ಬಳಿಕ ಚಾಲನೆ ದೊರೆತಿದೆ. ಅಂದಾಜು 30 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಈ ಕಾಮಗಾರಿಯನ್ನು ಎ.ವಿ ಆರ್ ತೇಜಸ್ ಇನ್ಪ್ರಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ವಹಿಸಲಾಗಿದೆ. ಸುಮಾರು ಒಂದೂವರೆ ವರ್ಷದ ಅವಧಿಯಲ್ಲಿ ಕಾಮಗಾರಿ ಪೂರ್ಣಗೂಳ್ಳುವ ಭರವಸೆಯನ್ನು ಸಂಸ್ಥೆ ನೀಡಿದ್ದು, ಮಳೆ ಸಂಭವಿಸಿದ ಸಂದರ್ಭ ವಿಳಂಬವಾಗುವ ಸಾಧ್ಯತೆ ಇದೆ.
ಈ ಹಿಂದೆ ಸಹ ಒಂದು ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಪ್ರವಾಹ ಸಂದರ್ಭದಲ್ಲಿ ಈ ಸೇತುವೆ ಸಹ ಮುಳುಗಡೆಯಾಗುತ್ತಿತ್ತು. ಬಳಿಕ ಸದ್ಯಕ್ಕೆ ಇರುವ ಸೇತುವೆಗಿಂತ ಇನ್ನಷ್ಟು ಎತ್ತರಕ್ಕೆ ನಿರ್ಮಿಸಲು ನಿರ್ಧರಿಸಲಾಗಿದೆ. ನೀಲಿ ನಕ್ಷೆಯನ್ನು ತಯಾರಿಸಿ ಇದೀಗ ಕಾಮಗಾರಿ ಆರಂಭಿಸಲಾಗಿದೆ……