Breaking News

ರಾಜ್ಯದಲ್ಲಿ ಭಾರತ ಬಂದ್ ಯಶಸ್ವಿ..!

ಬಂದ್..ಬಂದ್..ಬಂದ್....

SHARE......LIKE......COMMENT......

ಬೆಂಗಳೂರು:

ಕೇಂದ್ರದ ಕಾರ್ಮಿಕ ನೀತಿ ಖಂಡಿಸಿ ಕರೆ ನೀಡಿರುವ ಭಾರತ್ ಬಂದ್​ಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳಲ್ಲೂ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ಕೊಟ್ಟು ಹೋರಾಟ ಮಾಡಿದರು.

ಕರ್ನಾಟದಲ್ಲಿ ಮುಷ್ಕರಕ್ಕೆ ಭಾರಿ ಬೆಂಬಲ ವ್ಯಕ್ತವಾಯ್ತು…ರಾಜಧಾನಿ ಬೆಂಗಳೂರು ಸೇರಿ ಎಲ್ಲ ಜಿಲ್ಲೆಗಳಲ್ಲೂ ಕಾರ್ಮಿಕ ಸಂಘಟನೆಗಳು ಪ್ರೊಟೆಸ್ಟ್ ಮಾಡಿದ್ವು. ಬಹುತೇಕ ಕಡೆ ಅಂಗಡಿ ಮುಂಗಟ್ಟುಗಳನ್ನ ಬಂದ್​ ಮಾಡಲಾಗ್ತಿತ್ತು. KSRTC, BMTC ಬಸ್​, ಆಟೋ, ಕ್ಯಾಬ್​ಗಳ ಸಂಚಾರ ಭಾಗಷಃ ಸ್ಥಗಿತವಾಗಿದೆ. ಹೀಗಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಬೇರೆ ಬೇರೆ ಸ್ಥಳಗಳಿಂದ ಬಂದ್ ಪ್ರಯಾಣಿಕರು ನಗರದ ಬಸ್​ ನಿಲ್ದಾಣದಲ್ಲಿದ್ದು, ಇತ್ತ ಆಟೋನೂ ಸಿಗದೇ, ಬಸ್ಸು ಸಿಗದೇ ಕಂಗಾಲಾಗಿದ್ದಾರೆ. ಕೆಲ ಜಿಲ್ಲೆಗಳಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಕೆಲ ಜಿಲ್ಲೆಗಳಲ್ಲಿ ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸಿದ್ರೂ ವಿದ್ಯಾರ್ಥಿಗಳು ವಿರಳ ಸಂಖ್ಯೆಯಲ್ಲಿ ಹಾಜರಾಗಿದ್ದರು…..