Breaking News

ಭೋರ್ಗರೆಯುತ್ತಿದ್ದ ಡ್ಯಾಂನಲ್ಲಿ ಯುವಕನ ಹುಚ್ಚಾಟ..!

ಜಲಾಶಯವನ್ನ ಹತ್ತಲು ಹೋಗಿ ಕೆಳಗೆ ಜಾರಿ ಬಿದ್ದ..

SHARE......LIKE......COMMENT......

ಚಿಕ್ಕಬಳ್ಳಾಪುರ:
ಸತತ ಮಳೆಯಿಂದ ಭರ್ತಿಯಾಗಿ ಭೋರ್ಗರೆಯುತ್ತಿದ್ದ ಡ್ಯಾಂನಲ್ಲಿ ಹುಚ್ಚಾಟ ಆಡಲು ಹೋದ ಯುವಕನೊಬ್ಬ ಆಸ್ಪತ್ರೆ ಪಾಲಾಗಿದ್ದಾನೆ. ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯವನ್ನು ಹತ್ತಲು ಹೋಗಿ ಗೌರಿಬಿದನೂರು ಮೂಲದ ಯುವಕ ಮೇಲಿಂದ ಕೆಳಗೆ ಜಾರಿ ಬಿದ್ದಿದ್ದಾನೆ. ಯುವಕ ಜಾರಿ ಬೀಳುವ ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.