Breaking News

2019ರವರೆಗೂ ಕಾಯಬೇಕು..!

ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ.....

SHARE......LIKE......COMMENT......

ನವದೆಹಲಿ:

500 ವರ್ಷದ ಅಯೋಧ್ಯೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಜಾಗದ ವಿವಾದ ಬಗೆಹರಿಯಲು 2019ರವರೆಗೂ ಕಾಯಬೇಕು. ಇವತ್ತು ವಿಚಾರಣೆ ಆರಂಭಿಸಿದ ಸುಪ್ರೀಂಕೋರ್ಟ್ ಕೇವಲ ಎರಡೇ ವಾಕ್ಯದಲ್ಲಿ ವಿಚಾರಣೆ ಮುಗಿಸಿ ಪ್ರಕರಣವನ್ನು ಜನವರಿಗೆ ಮುಂದೂಡಿದೆ. ಮುಖ್ಯ ನ್ಯಾಯಮೂರ್ತಿ ರಂಜನ್​​​​ ಗೊಗೊಯ್​​​ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ಆರಂಭಿಸಿತು. ಆದರೆ ತ್ವರಿತ ವಿಚಾರಣೆಗೆ ನಿರಾಕರಿಸಿ ಜನವರಿಯಲ್ಲೇ ವಿಚಾರಣೆಯ ಸ್ವರೂಪ ಮತ್ತು ಹೊಸ ಪೀಠದ ರಚನೆ ಸಂಬಂಧ ತೀರ್ಮಾನ ಮಾಡೋದಾಗಿ ಹೇಳಿದೆ.

2010ರಲ್ಲಿ ಅಲಹಾಬಾದ್​ ವಿಶೇಷ ಕೋರ್ಟ್​ ವಿವಾದಿತ ಭೂಮಿಯನ್ನು ಮೂರು ಭಾಗ ಮಾಡಿ ಒಂದನ್ನು ಸುನ್ನಿ ವಕ್ಫ್​​​ ಬೋರ್ಡ್​, ಮತ್ತೊಂದು ತುಂಡನ್ನು ನಿರೋಮಿ ಆಕಾರ ಮತ್ತು ಮತ್ತೊಂದು ಭಾಗವನ್ನು ರಾಮ್​​ ಲಲ್ಲಾಗೆ ನೀಡಲು ಆದೇಶ ಕೊಟ್ಟಿತ್ತು. ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು……