Breaking News

ದೆಹಲಿ ನರ ರಾಕ್ಷಸ ಮಂಪರು ಪರೀಕ್ಷೆಯಲ್ಲಿ ಹೇಳಿದ್ದೇನು..?

ಶ್ರದ್ಧಾ ಹತ್ಯೆ ಬಗ್ಗೆ FSL ಅಧಿಕಾರಿಗಳ ಮುಂದೆ ಸತ್ಯ ಹೇಳಿದ್ನಾ....

SHARE......LIKE......COMMENT......

ದೆಹಲಿ :

ಶ್ರದ್ಧಾ ನನ್ನನ್ನು ಬಿಟ್ಟು ಹೋಗ್ತೀನಿ ಅಂತಾ ಬೆದರಿಸಿದ್ದಳು, ನಿನ್ನ ಮದುವೆ ಆಗಲ್ಲಾ. ನಿನ್ನ ಜತೆ ಇರೋದಿಲ್ಲ ಎಂದಿದ್ದಳು, ಬ್ಲಾಕ್​​ಮೇಲ್​​, ಬೆದರಿಕೆ ಮಾಡಿದ್ದಕ್ಕೆ ನಾನು ಕೊಲೆ ಮಾಡಿದೆ ಎಂದು ನಾರ್ಕೋ ಅನಾಲಿಸಿಸ್​ ಟೆಸ್ಟ್​ನಲ್ಲಿ ಅಫ್ತಾಬ್​ ಈ ರೀತಿ ಹೇಳಿಕೆ ನೀಡಿದ್ದಾನೆ.

ಎರಡು ಗಂಟೆಗಳ ಕಾಲ ತಜ್ಞರು ಮಂಪರು ಪರೀಕ್ಷೆ ಮಾಡಿದರು. ಈ ಮಂಪರು ಪರೀಕ್ಷೆಗೆ ದೆಹಲಿ ರೋಹಿಣಿ ಆಸ್ಪತ್ರೆಯ ಇಬ್ಬರು ಡಾಕ್ಟರ್​ಗಳು, ಇಬ್ಬರು ಮನಃಶಾಸ್ತ್ರಜ್ಞರು, ಇಬ್ಬರು ಫೋಟೋ ಎಕ್ಸ್​ಫರ್ಟ್​ ಹಾಜರಿದ್ದರು. ತಜ್ಞರು ಅಫ್ತಾಬ್​​ಗೆ 20-25 ಪ್ರಶ್ನೆಗಳನ್ನುಕೇಳಿ ಉತ್ತರ ಪಡೆದಿದ್ದಾರೆ. ಈ ವೇಳೆ ಶ್ರದ್ಧಾಳ ತಲೆ ಬುರುಡೆ ಎಲ್ಲಿ ಎಂಬ ಪ್ರಶ್ನೆಗೆ ಅಫ್ತಾಬ್​​​ ಉತ್ತರ ನೀಡಿ, ನನಗೆ ನೆನಪಿಲ್ಲಾ.. ಕೆಲವು ವಸ್ತುಗಳನ್ನು ಸಾಕ್ಷ್ಯ ನಾಶಕ್ಕಾಗಿ ಸುಟ್ಟಿದ್ದೇನೆ, ಚೂಪಾದ ಚಾಕು ಬಳಸಿ ಪೀಸ್​..ಪೀಸ್ ಮಾಡಿದ್ದೇನೆ ಎಂದು ಹೇಳಿದ್ದಾನೆ.

ಮಂಪರು ಪರೀಕ್ಷೆಯಲ್ಲೂ ತಲೆ ಬುರುಡೆ ರಹಸ್ಯ ಬಯಲಾಗಲೇ ಇಲ್ಲ. ಮಂಪರು ಪರೀಕ್ಷೆ ಮಾಹಿತಿ ಆಧರಿಸಿ ಇಂದು ಮತ್ತೊಮ್ಮೆ ದೆಹಲಿಯ ಸ್ಪೆಷಲ್​ ಟೀಂನ ಅಧಿಕಾರಿಗಳಿಂದ ವಿಚಾರಣೆ ನಡೆಯಲಿದೆ……