Breaking News

ಎಂಜಾಯ್​ ಮಾಡ್ತಿರುವ ವಾಟರ್ ಬೇಬಿ ರಶ್ಮಿಕಾ ಮಂದಣ್ಣ..!

ಮಾಲ್ಡೀವ್ಸ್​ನಲ್ಲಿ ರಶ್ಮಿಕಾ ಜೊತೆ ವಿಜಯ್​ ದೇವರಕೊಂಡ....

SHARE......LIKE......COMMENT......

ಬೆಂಗಳೂರು:

ಮಾಲ್ಡೀವ್ಸ್​ನಿಂದ ಹಲವು ಫೋಟೋಗಳನ್ನು ರಶ್ಮಿಕಾ ಮಂದಣ್ಣ ಶೇರ್​ ಮಾಡುತ್ತಿದ್ದಾರೆ. ಅವು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ನಟಿ ರಶ್ಮಿಕಾ ಮಂದಣ್ಣ ಅವರು ಈಗ ಪ್ರವಾಸದ ಮಜಾ ಸವಿಯುತ್ತಿದ್ದಾರೆ. ಸಿನಿಮಾ ಕೆಲಸಗಳಿಗೆ ಕೊಂಚ ಬ್ರೇಕ್​ ನೀಡಿರುವ ಅವರು ಈಗ ಮಾಲ್ಡೀವ್ಸ್​ಗೆ (Maldives) ತೆರಳಿದ್ದಾರೆ. ಅಲ್ಲಿನ ಕಡಲ ತೀರದಲ್ಲಿ ಈಜಾಡುತ್ತಾ ಕಾಲ ಕಳೆಯುತ್ತಿದ್ದಾರೆ. ತಮ್ಮ ಪ್ರವಾಸದ ಬಗ್ಗೆ ಇನ್​ಸ್ಟಾಗ್ರಾಮ್​ ಮೂಲಕ ಅಪ್​ಡೇಟ್​ ನೀಡುತ್ತಿದ್ದಾರೆ.

ನೀರಿನಲ್ಲಿ ಎಂಜಾಯ್​ ಮಾಡುತ್ತಿರುವ ತಮ್ಮನ್ನು ತಾವು ‘ವಾಟರ್​ ಬೇಬಿ’ ಎಂದು ಅವರು ಕರೆದುಕೊಂಡಿದ್ದಾರೆ. ಅವರು ನಟಿಸಿದ ‘ಗುಡ್​ಬೈ’ (Goodbye) ಸಿನಿಮಾ ಇತ್ತೀಚೆಗೆ ರಿಲೀಸ್​ ಆಗಿ ಸೋತಿದೆ. ಸೋಲಿನ ಚಿಂತೆ ಬಿಟ್ಟು ಅವರು ಮಾಲ್ಡೀವ್ಸ್​ನಲ್ಲಿ ರಿಲ್ಯಾಕ್ಸ್​ ಮಾಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್​ನಲ್ಲೂ ರಶ್ಮಿಕಾ ಮಂದಣ್ಣ ಅವರಿಗೆ ಬೇಡಿಕೆ ಇದೆ. ಅವರು ನಟಿಸಿದ ‘ಗುಡ್​ಬೈ’ ಸಿನಿಮಾ ಬಗ್ಗೆ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಯಾಕೆಂದರೆ, ಹಿಂದಿಯಲ್ಲಿ ರಿಲೀಸ್​ ಆದ ರಶ್ಮಿಕಾ ಮಂದಣ್ಣ ಅವರ ಮೊದಲ ಚಿತ್ರವಿದು. ಈ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್​, ನೀನಾ ಗುಪ್ತಾ ಮುಂತಾದ ಹಿರಿಯರ ಜೊತೆ ನಟಿಸುವ ಅವಕಾಶವನ್ನು ರಶ್ಮಿಕಾ ಪಡೆದುಕೊಂಡರು. ಟ್ರೇಲರ್​ ಕೂಡ ಮೆಚ್ಚುಗೆ ಗಳಿಸಿತ್ತು. ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಸೂಪರ್​ ಹಿಟ್​ ಆಗಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ.

ಮೊದಲ ದಿನ (ಅ.7) ‘ಗುಡ್​ಬೈ’ ಸಿನಿಮಾ ಗಳಿಸಿದ್ದು ಕೇವಲ 90 ಲಕ್ಷ ರೂಪಾಯಿ ಮಾತ್ರ. ಎರಡನೇ ದಿನ 1.35 ಕೋಟಿ ರೂಪಾಯಿ. ನಂತರದ ದಿನಗಳಲ್ಲಿ ಪರಿಸ್ಥಿತಿ ಏನೂ ಸುಧಾರಿಸಲಿಲ್ಲ. ಈ ಚಿತ್ರದಿಂದ ನಿರ್ಮಾಪಕರು ಕೈ ಸುಟ್ಟುಕೊಳ್ಳುವಂತಾಗಿದೆ. ಈ ಚಿಂತೆಯನ್ನು ಬದಿಗಿಟ್ಟು ರಶ್ಮಿಕಾ ಮಂದಣ್ಣ ಅವರು ಪ್ರವಾಸದಲ್ಲಿ ಖುಷಿಯಾಗಿದ್ದಾರೆ.

ಮಾಲ್ಡೀವ್ಸ್​ನಿಂದ ಹಲವು ಫೋಟೋಗಳನ್ನು ರಶ್ಮಿಕಾ ಶೇರ್​ ಮಾಡುತ್ತಿದ್ದಾರೆ. ಸಮುದ್ರದ ಆಳಕ್ಕೆ ಇಳಿದು ಮೀನಿನಂತೆ ಈಜಾಡಿದ್ದಾರೆ. ಅದರ ವಿಡಿಯೋವನ್ನು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಅವರು ಹಂಚಿಕೊಂಡಿದ್ದಾರೆ. ರಶ್ಮಿಕಾ ಜೊತೆ ವಿಜಯ್​ ದೇವರಕೊಂಡ ಕೂಡ ಮಾಲ್ಡೀವ್ಸ್​ಗೆ ತೆರಳಿದ್ದಾರೆ ಎಂಬ ಅನುಮಾನ ಇದೆ. ಅವರಿಬ್ಬರು ಜೊತೆಯಾಗಿ ಯಾವುದೇ ಫೋಟೋ ಹಂಚಿಕೊಂಡಿಲ್ಲ. ಆದರೆ ಒಂದು ಫೋಟೋದಲ್ಲಿ ರಶ್ಮಿಕಾ ಧರಿಸಿರುವ ಕೂಲಿಂಗ್​ ಗ್ಲಾಸ್​ ವಿಜಯ್​ ದೇವರಕೊಂಡ ಅವರದ್ದು ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ಅಕ್ಟೋಬರ್ 7ರಂದು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಕೆಲವೇ ನಿಮಿಷಗಳ ಅಂತರದಲ್ಲಿ ಮುಂಬೈ ವಿಮಾನ ನಿಲ್ದಾಣ ಪ್ರವೇಶ ಮಾಡಿದ್ದರು. ಇದು ಕ್ಯಾಮೆರಾದಲ್ಲಿ ಸೆರೆ ಆಗಿತ್ತು. ಅವರಿಬ್ಬರು ಒಟ್ಟಿಗೆ ಪ್ರಯಾಣ ಮಾಡಿರಬಹುದು ಎಂಬ ಅನುಮಾನಕ್ಕೆ ಈ ಘಟನೆ ಕೂಡ ಪುಷ್ಠಿ ನೀಡುವಂತಿದೆ……