Breaking News

ACB ರೇಡ್ ನಲ್ಲಿ ಸಿಕ್ಕಿ ಬಿದ್ದ ರುದ್ರೇಶಪ್ಪ ಜೈಲುಪಾಲು..!

ಡಿಸೆಂಬರ್ 14ವರೆಗೆ ನ್ಯಾಯಾಂಗ ಬಂಧನ....

SHARE......LIKE......COMMENT......

ಬೆಂಗಳೂರು:

ಬಂಗಾರದ‌ ಬೆಳೆ ಬೆಳೆದಿದ್ದ ಕೃಷಿ ಇಲಾಖೆ ಜೆಡಿ ರುದ್ರೇಶಪ್ಪ ಜೈಲುಪಾಲಾಗಿದ್ದಾರೆ. ಗದಗ ಜಿಲ್ಲೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಮನೆಯಲ್ಲಿ ಎಸಿಬಿ ರೇಡ್​ ವೇಳೆ ಕೋಟಿಕೋಟಿ ಸಂಪತ್ತು ಪತ್ತೆಯಾಗಿತ್ತು. ಚಿನ್ನದ ಬಿಸ್ಕೆಟ್​, ಚಿನ್ನದ ಆಭರಣ, ಲಕ್ಷಾಂತರ ರೂ ನಗದು, ಶಿವಮೊಗ್ಗದಲ್ಲಿ ಎರಡು ಮನೆ, ನಾಲ್ಕು ಸೈಟು ಪತ್ತೆಯಾದ ಹಿನ್ನೆಲೆಯಲ್ಲಿ ಎಸಿಬಿ ಅರೆಸ್ಟ್ ಮಾಡಿತ್ತು. ಆದಾಯ ಮೀರಿ ಹಣ, ಆಸ್ತಿಗಳಿಸಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್ ಬ್ಯಾಲೆನ್ಸ್, ಲಾಕರ್​​​ ಸರ್ಚ್ ಮಾಡಲಾಗಿದೆ. ಜಡ್ಜ್​ ಮುಂದೆ ರುದ್ರೇಶಪ್ಪನ ಹಾಜರುಪಡಿಸಿದ್ದು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ…..