Breaking News

ಸಾವಿರಾರು ಅಂಧರಿಗೆ ಕಣ್ಣಾದ ಪುಟ್ಟರಾಜ ಗವಾಯಿ..!

ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಮತ....

ಹಟ್ಟಿಚಿನ್ನದಗಣಿ /ರಾಯಚೂರು:

ಪುಟ್ಟರಾಜ ಗವಾಯಿಗಳು ಹುಟ್ಟು ಕುರುಡರಾಗಿದ್ದರೂ ಸಾವಿರಾರು ಅಂಧರ ಬಾಳಿಗೆ ಬೆಳಕಾಗಿದ್ದಾರೆ ಎಂದು ಮುದೇನೂರಿನ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ಪಟ್ಟಣದ ಸ್ನೇಹ ಸಮುದಾಯ ಭವನದಲ್ಲಿ ಸುನೀತಾ ಮೆಲೋಡಿಸ್‌ನಿಂದ ಪುಟ್ಟರಾಜ ಗವಾಯಿಗಳ 8ನೇ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗಾನ ಗಂಧರ್ವನಿಗೆ ಗಾನ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ಸಂಗೀತ ಮನುಷ್ಯನ ರೋಗಕ್ಕೆ ಮದ್ದಾಗಿದೆ. ಶಾಸ್ತ್ರೀಯ ಸಂಗೀತ, ಸುಗಮ ಸಂಗೀತಕ್ಕೆ ಎಲ್ಲಿಲ್ಲದ ಬೇಡಿಕೆಯಿದ್ದು, ನಾಡಿನ ಕಲೆ, ಸಂಸ್ಕೃತಿ ಉಳಿಸಿಕೊಂಡು ಹೋಗಬೇಕು ಎಂದರು.ಬೇಡರ ಕಾರಲಕುಂಟಿಯ ಕಾಲಜ್ಞಾನ ಮಠದ ಬಸವರಾಜ ಸ್ವಾಮೀಜಿ ಆಶೀರ್ವಚನ ನೀಡಿದರು…….