Breaking News

ನಿಮ್ಮ ಜಾತಕದಲ್ಲಿ ಪಿತೃದೋಷ ಇದೆಯಾ..?

ಯಾವ ಜಾತಕದಲ್ಲಿ ಜನಿಸಿದವರಿಗೆ ಪಿತೃದೋಷ ಇರುತ್ತದೆ....

SHARE......LIKE......COMMENT......

ಧರ್ಮ-ಜ್ಯೋತಿ:

ಮೂರು ಮುಖ್ಯ ದೋಷಗಳಲ್ಲಿ ಪಿತೃದೋಷವೂ ಒಂದು. ಇದು ಏಕೆ ಬರುತ್ತದೆ, ಇದನ್ನು ನಿವಾರಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಹಿಂದೂ ಪಂಚಾಂಗದ ಪ್ರಕಾರ ಒಂದು ಸಂವತ್ಸರದಲ್ಲಿ 12 ಅಮಾವಾಸ್ಯೆ ಬರುವುದು. ಅವು ಯಾವುವು ಎಂದರೆ ಅಕ್ಷಯತದಿಗೆ ಅಮಾವಾಸ್ಯೆ, ಬಾದಾಮಿ ಅಮಾವಾಸ್ಯೆ, ಮಣ್ಣೆತ್ತಿನ ಅಮಾವಾಸ್ಯೆ, ನಾಗರ ಅಮಾವಾಸ್ಯೆ, ಬೆನಕ ಅಮಾವಾಸ್ಯೆ, ಮಹಾಲಯ ಅಮಾವಾಸ್ಯೆ, ದೀಪಾವಳಿ ಅಮಾವಾಸ್ಯೆ, ಛಟ್ಟಿ ಅಮಾವಾಸ್ಯೆ, ಎಳ್ಳಮಾವಾಸ್ಯೆ, ಅವರಾತ್ರಿ ಅಮಾವಾಸ್ಯೆ, ಶಿವರಾತ್ರಿ ಅಮಾವಾಸ್ಯೆ, ಯುಗಾದಿ ಅಮಾವಾಸ್ಯೆ.

ಅಮಾವಾಸ್ಯೆ ಎಂಬುದಕ್ಕೆ ವಿಶೇಷ ಅರ್ಥವಿದೆ. ಅಮಾಯಾಂ ವಸತಃ -ಅಂದರೆ ಸೂರ್ಯ ಚಂದ್ರರು ಒಂದೇ ಮನೆಯಲ್ಲಿರುವುದು (ಸರಳ ರೇಖೆಯಲ್ಲಿ). ಪ್ರತಿವರ್ಷ ಬರುವ ಭಾದ್ರಪದ ಮಾಸದ ಮಹಾಲಯ ಅಮಾವಾಸ್ಯೆ ಎಲ್ಲಾ ಅಮಾವಾಸ್ಯೆಗಳಿಗಿಂತ ವಿಶೇಷವಾದದ್ದು. ಆದ್ದರಿಂದ ಇದನ್ನು ಮಹಾಲಯ ಅಮಾವಾಸ್ಯೆ ಎಂದು ಕರೆದರು. ಈ ಅಮಾವಾಸ್ಯೆ ಪಿತೃಪಕ್ಷದ ಕೊನೆಯ ದಿನ.

ಕುಂಡಲಿಯಲ್ಲಿಯೂ ಪಿತೃದೋಷ ಕಾಡುತ್ತದೆ?

ದೋಷಗಳಲ್ಲಿ ಅತಿ ಮುಖ್ಯವಾದವು ಎಂದರೆ ಕುಜ ದೋಷ, ರಾಹು ದೋಷ ಹಾಗೂ ಪಿತೃದೋಷ.
ಲಗ್ನದಿಂದ 5, 6 ಮತ್ತು 7ನೇ ಮನೆಯಿಂದ ಪಿತೃದೋಷವನ್ನು ಕಂಡುಹಿಡಿಯಲು ಸಾಧ್ಯ. ಲಗ್ನದಿಂದ 5ನೇ ಮನೆಯಲ್ಲಿ ರಾಹು ಮತ್ತು ಗುರು ಇದ್ದರೆ ಅದಕ್ಕೆ ರವಿ ದೃಷ್ಟಿ ಇದ್ದರೆ ಪಿತೃದೋಷ ಬರುವುದು. ಇದರಿಂದ ಸಂತಾನಕ್ಕೆ ತೊಂದರೆ ಇರುತ್ತದೆ. ಲಗ್ನದಿಂದ 7ನೇ ಮನೆಯಲ್ಲಿ ರಾಹು ಅಥವಾ ಕೇತು ಗ್ರಹಗಳು ಇದ್ದು ಅದಕ್ಕೆ ಶುಕ್ರನ ದೃಷ್ಟಿ ಇದ್ದರೆ ವಿವಾಹಕ್ಕೆ ತಡೆ ಉಂಟಾಗುವುದು. ಲಗ್ನದಿಂದ ಮಾತೃಸ್ಥಾನವನ್ನು 4ನೇ ಮನೆಯಿಂದ, ಪಿತೃಸ್ಥಾನವನ್ನು 9ನೇ ಮನೆಯಿಂದ ತಿಳಿಯಬಹುದು. ಆ ಮನೆಗಳಲ್ಲಿ ಪಾಪಗ್ರಹಗಳಿದ್ದು ರವಿ ದೃಷ್ಟಿ ಇದ್ದರೆ ಆಗಲೂ ಪಿತೃದೋಷ ಉಂಟಾಗುವುದು.

ಯಾವ ಕಾರಣಗಳಿಂದ ನಿಮಗೆ ಪಿತೃದೋಷ ಕಾಡುತ್ತದೆ?

ಪಿತೃಗಳು ಗತಿಸಿದಾಗ ಅವರ ಕಾಲಾಂತರದ ಕ್ರಿಯೆಗಳು ಸರಿಯಾಗಿ ಮಾಡದೆ ಇರುವುದು, ಪ್ರತಿವರ್ಷ ಪಿತೃಗಳ ಕಾರ್ಯ ಮಾಡದೇ ಇರುವುದು, ಅಪಘಾತದಲ್ಲಿ ಮರಣ ಹೊಂದಿದ ವ್ಯಕ್ತಿಗೆ ಸರಿಯಾದ ರೀತಿಯಲ್ಲಿ ಕಾರ್ಯ ಮಾಡದೇ ಇರುವುದು : ಈ ಕಾರಣಗಳಿಂದಾಗಿ ದೋಷ ಉಂಟಾಗಲು ಸಾಧ್ಯ.

ದೈವಾರಾಧನೆ ಮರೆತರೂ ಶ್ರಾದ್ಧಕಾರ್ಯವನ್ನು ಮರೆಯಬಾರದು ಎನ್ನುತ್ತದೆ ಶಾಸ್ತ್ರ. ಏಕೆಂದರೆ ದೇವತೆಗಳಿಗೆ ಹವಿಸ್ಸನ್ನು ಯಜ್ಞ, ಯಾಗ ಹಾಗೂ ಹೋಮಗಳ ಮೂಲಕ ಅಗ್ನಿಯಿಂದ ನೀಡಿರುತ್ತೇವೆ. ಅದೇ ರೀತಿ ಪಿತೃದೇವತೆಗಳಿಗೆ ಶ್ರಾದ್ಧ ಮಾಡುವಾಗ ಎಳ್ಳಿನಿಂದ ತರ್ಪಣ ನೀಡುತ್ತೇವೆ ಹಾಗೂ ಅವರಿಗೆ ಇಷ್ಟವಾದ ಆಹಾರ ಪದಾರ್ಥವನ್ನೂ ಎಡೆ ಇಡುತ್ತೇವೆ. ಸ್ಥೂಲ ಶರೀರದಲ್ಲಿ ನಮ್ಮ ಕಣ್ಣ ಮುಂದೆ ಇಲ್ಲದಿದ್ದರೂ ಸೂಕ್ಷ್ಮ ಶರೀರದಿಂದ ಪರೋಕ್ಷವಾಗಿ ನಾವು ಮಾಡುವ ಪಿತೃಕಾರ್ಯಗಳನ್ನು ಅವರು ವೀಕ್ಷಿಸುತ್ತಾರೆ. ಅವರ ಆಶೀರ್ವಾದದಿಂದಲೇ ನಮಗೆ ವಿವಾಹ, ಸಂತಾನ, ಸುಖ ಹಾಗೂ ಧನಲಾಭಗಳು ಉಂಟಾಗುತ್ತವೆ. ಮಹಾಲಯ ಅಮಾವಾಸ್ಯೆ ಸಮಯದಲ್ಲಿ ಹಿರಿಯರ ಕಾರ‍್ಯ ಮಾಡುವುದರ ಜೊತೆಯಲ್ಲಿ ಮನೆಯಲ್ಲಿ ಸಾಕಿದ ಪ್ರಾಣಿಪಕ್ಷಿಗಳು ಗತಿಸಿರುತ್ತವೆ. ಅವುಗಳಿಗೂ ಸಹ ಕಾರ್ಯವನ್ನು ಮಾಡಬಹುದು.

ಪಿತೃಗಳಿಂದ ವರವೂ ಉಂಟು ಶಾಪವೂ ಉಂಟು?

ಸುರಪುರದಲ್ಲಿ ರಾಮಭಟ್ಟ ಎಂಬುವನು ತನ್ನ ತಂದೆತಾಯಿಯ ಶ್ರಾದ್ಧವನ್ನು ಶ್ರದ್ಧೆಯಿಂದ ಮಾಡುತ್ತಿದ್ದನು. ಆದರೆ, ಆತನಿಗೆ ಬಡತನದ ಒತ್ತಡ ಕಾಡುತ್ತಿತ್ತು. ಆದರೂ ಪಿತೃಕಾರ್ಯ ಮಾತ್ರ ಬಿಡುತ್ತಿರಲಿಲ್ಲ. ಒಂದು ಸಲ ಪಿತೃಕಾರ್ಯ ಮಾಡಲು ಮನೆಯಲ್ಲಿ ಯಾವ ಆಹಾರ ಪದಾರ್ಥವೂ ಇರಲಿಲ್ಲ.ಎಳ್ಳು ಮಾತ್ರ ಇತ್ತು. ಅದರಿಂದಲೇ ಎಳ್ಳುಂಡೆ ಮಾಡಿ ಬ್ರಾಹ್ಮಣರಿಗೆ ದಾನ ಮಾಡಿದ. ಆ ದಿನ ರಾತ್ರಿ ಅವನ ತಂದೆ ಕನಸಿನಲ್ಲಿ ಬಂದು, ‘ನಾನು ಮಲಗುತ್ತಿದ್ದ ಜಾಗದಲ್ಲಿ (ನೆಲದ ಕೆಳಗೆ) ಹಣವನ್ನು ಇಟ್ಟಿರುವೆ, ಅದನ್ನು ಅನುಭವಿಸು’ ಎಂದನು. ಅದರಂತೆ ಆ ಜಾಗದಲ್ಲಿ ನೋಡಿದಾಗ ಹಣ ಇತ್ತು. ಅದನ್ನು ತೆಗೆದುಕೊಂಡು ಶ್ರೀಮಂತನಾದನು. ಪಿತೃಗಳಿಂದ ವರ ಲಭಿಸಿತು. ಮೂರನೇ ವರ್ಷ ಪಿತೃಕಾರ್ಯ ಮಾಡಲು ಹಣ ಇದ್ದರೂ ಎಳ್ಳುಂಡೆಯನ್ನೇ ದಾನ ಮಾಡಿದನು. ಇದರಿಂದ ಪಿತೃಗಳು ಕೋಪಗೊಂಡು ಶಾಪವನ್ನು ಆತನಿಗೆ ನೀಡಿ, ನೀನು ಮೊದಲಿನಂತೆ ಬಡತನ ಅನುಭವಿಸು ಎಂದರು. ಮಾತಾಪಿತೃಗಳು ಇರುವಾಗ ಅವರನ್ನು ಸರಿಯಾಗಿ ನೋಡಿಕೊಳ್ಳದೆ ಅವರ ನಿಧನದ ನಂತರ ಅವರ ಕಾರ್ಯವನ್ನು ಅದ್ಧೂರಿಯಾಗಿ ಮಾಡಿದರೆ ಉಪಯೋಗ ಇರುವುದಿಲ್ಲ. ತಂದೆತಾಯಿ ಪ್ರತ್ಯಕ್ಷ ದೇವರು ಎಂಬ ನಂಬಿಕೆ ನಮ್ಮಲ್ಲಿ ದೃಢವಾಗಿರುವುದು ಇದಕ್ಕೇ.

ಯಾವ ವಿಧಿವಿಧಾನಗಳನ್ನ ಅನುಸರಿಸಿದರೆ ನಿಮ್ಮ ಸಮಸ್ಯೆ ಪರಿಹಾರವಾಗುತ್ತೆ?

1. ಶ್ರಾದ್ಧದ ದಿನ ಮನೆಯ ಮುಂದೆ ಮತ್ತು ದೇವರ ಮುಂದೆ ರಂಗೋಲಿ ಹಾಕಬಾರದು, ಕಾರ್ಯದ ನಂತರ ಹಾಕಬೇಕು.
2. ಶ್ರಾದ್ಧವನ್ನು ಸ್ವಗೃಹದಲ್ಲಿಯೇ ಮಾಡಬೇಕು.
3. ಶ್ರಾದ್ಧವನ್ನು ಗಂಡು ಮಕ್ಕಳು ಮಾಡಬೇಕು . ಅವರು ಇಲ್ಲದೆ ಇದ್ದರೆ ಅಳಿಯಂದಿರು ಮಾಡಬಹುದು.
4. ಶ್ರಾದ್ಧವನ್ನು ಮಧ್ಯಾಹ್ನ 12 ಗಂಟೆ ನಂತರ ಮಾಡಬೇಕು.
5. ಶ್ರಾದ್ಧ ಮಾಡಿದ ದಿನ ರಾತ್ರಿ ಊಟ ಮಾಡಬಾರದು.
6. ಶ್ರಾದ್ಧ ಪ್ರಸಾದವನ್ನು ಮನೆಯವರು ಮಾತ್ರ ಉಪಯೋಗಿಸಬೇಕು.
7. ಶ್ರಾದ್ಧದಲ್ಲಿ ಹತ್ತಿರದ ಸಂಬಂಧಿಕರು ಮಾತ್ರ ಭಾಗಿ ಆಗಬೇಕು.
8. ಶ್ರಾದ್ಧ ಮಾಡಲು ಅನನುಕೂಲ ಇದ್ದರೆ ಸ್ವಯಂ ಪಾಕ ಅಥವಾ ಪಡಿಯನ್ನು ನೀಡಬಹುದು.
9. ಶ್ರಾದ್ಧದ ದಿನ ಹಾಗೂ ಹಿಂದಿನ ದಿನ ಬ್ರಹ್ಮ ಚರ‍್ಯವನ್ನು ಪಾಲಿಸಬೆಕು.                                                                                                    10. ಶ್ರಾದ್ಧವನ್ನು ದಕ್ಷಿಣ ದಿಕ್ಕಿಗೆ ತಿರುಗಿ ಮಾಡಬೇಕು                                                                                                                          11. ಶ್ರಾದ್ಧ ಮಡುವವರು ಹಿಂದಿನ ದಿನ ರಾತ್ರಿ ಊಟ ಮಾಡಬಾರದು ಫಲಹಾರ ಮಾಡಬೇಕು
12. ಶ್ರಾದ್ಧವನ್ನು ಶ್ರದ್ಧೆಯಿಂದ ಮಾಡಬೇಕು……