Breaking News

ಸ್ಟಾರ್‌ಗಳ ಚಿತ್ರ ನೋಡುವ ಸೌಭಾಗ್ಯ ಈ ವರ್ಷ ಪ್ರೇಕ್ಷಕರಿಗೆ ಇಲ್ಲ..!

ಪ್ರೇಕ್ಷಕನನ್ನು ಥೇಟರಿಗೆ ಕರೆಸುವುದು ಪ್ರದರ್ಶಕರ ಕೈಯಲ್ಲಿದೆ....

SHARE......LIKE......COMMENT......

ಹೀಗೊಂದು ಖಡಕ್‌ ನಿರ್ಧಾರಕ್ಕೆ ಬಂದಿದ್ದಾರೆ ಕನ್ನಡ ಚಿತ್ರರಂಗದ ಹಲವು ನಿರ್ಮಾಪಕರು. ಅದರಲ್ಲೂ ಸ್ಟಾರ್‌ ನಟರಿರುವ ಚಿತ್ರಗಳ ನಿರ್ಮಾಪಕರಂತೂ ತಮ್ಮ ಚಿತ್ರಗಳನ್ನು ಥಿಯೇಟರ್‌ಗಳ ಕಡೆ ಮುಖ ಮಾಡಿಸದಿರಲು ಅಂತಿಮ ತೀರ್ಮಾನಕ್ಕೆ ಬಂದಿದ್ದಾರೆ. ಈಗಾಗಲೇ ಆ್ಯಕ್ಟಿವ್‌ ನಿರ್ಮಾಪಕರ ಒಂದು ತಂಡ ಈ ನಿಟ್ಟಿನಲ್ಲಿ ಸಭೆ ಮಾಡಿ ಈ ಗಟ್ಟಿ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲಿಗೆ ಶಿವರಾಜ್‌ಕುಮಾರ್‌, ದರ್ಶನ್‌, ಸುದೀಪ್‌, ಯಶ್‌, ಪುನೀತ್‌ ರಾಜ್‌ಕುಮಾರ್‌, ಧ್ರುವ ಸರ್ಜಾ, ದುನಿಯಾ ವಿಜಯ್‌, ಗಣೇಶ್‌ ಸೇರಿದಂತೆ ಹಲವು ಸ್ಟಾರ್‌ಗಳ ಚಿತ್ರ ನೋಡುವ ಸೌಭಾಗ್ಯ ಈ ವರ್ಷ ಪ್ರೇಕ್ಷಕರಿಗೆ ಇಲ್ಲ.

‘ಸರ್ಕಾರ ಹಾಕಿರುವ ಷರತ್ತುಗಳನ್ನು ಪಾಲಿಸಿಕೊಂಡು ಸಿನಿಮಾ ಬಿಡುಗಡೆ ಮಾಡುವುದೇ ದೊಡ್ಡ ಸಾಹಸ. ಬಿಡುಗಡೆ ಆಗುವ ಚಿತ್ರವನ್ನು ನೋಡಲು ಪ್ರೇಕ್ಷಕರು ಬರುವ ಗ್ಯಾರಂಟಿ ಇಲ್ಲ. ಈಗ ಸಿನಿಮಾ ಬಿಡುಗಡೆಯ ಸಂಭ್ರಮಕ್ಕಿಂತ ಆರೋಗ್ಯ ರಕ್ಷಣೆಯೇ ಮುಖ್ಯ. ಪಕ್ಕದ ರಾಜ್ಯಗಳಲ್ಲೂ ಚಿತ್ರಗಳು ಬಿಡುಗಡೆ ಆಗುತ್ತಿಲ್ಲ. ಬೇರೆ ಭಾಷೆಯ ದೊಡ್ಡ ದೊಡ್ಡ ಚಿತ್ರಗಳೇ ಬರುತ್ತಿಲ್ಲ. ಇಂಥ ಸಮಯದಲ್ಲಿ ನಾವು ಯಾಕೆ ರಿಸ್ಕ್‌ ತೆಗೆದುಕೊಳ್ಳಬೇಕು. ಈ ಸಂಕಷ್ಟ ಕಡಿಮೆ ಆಗುವ ತನಕ ನಮ್ಮ ಚಿತ್ರಗಳನ್ನು ಚಿತ್ರಮಂದಿರಗಳಿಗೆ ತರಲ್ಲ.’ ಚಿತ್ರಮಂದಿರಗಳಿಗೆ ನಾವು ಬರಲ್ಲ’ ಎಂದು ಸ್ಟಾರ್‌ ಚಿತ್ರಗಳ ನಿರ್ಮಾಪಕರು ಈಗ ಖಡಕ್‌ ಆಗಿ ಹೇಳಿದ್ದಾರೆ.

ಸದ್ಯದ ಮಾಹಿತಿಯಂತೆ ಸ್ಟಾರ್‌ ಚಿತ್ರಗಳು ಮಾತ್ರವಲ್ಲ, ಹೊಸಬರ ಚಿತ್ರಗಳೂ ಚಿತ್ರಮಂದಿರಗಳಿಗೆ ಬರುವುದು ಅನುಮಾನ. ಒಂದು ವೇಳೆ ಹೊಸದಾಗಿ ಬಿಡುಗಡೆ ಮಾಡುವುದಕ್ಕೆ ಹೊರಟರೆ ಅಂಥವರ ಜತೆಗೂ ಮಾತನಾಡಿ ಬಿಡುಗಡೆಯನ್ನು ಮುಂದೂಡಿಸುವಂತೆ ಮನ ಒಲಿಸುವುದಕ್ಕೂ ಇದೇ ನಿರ್ಮಾಪಕರು ಮುಂದಾಗಿದ್ದಾರೆ……