Breaking News

100 ಗಂಟೆಯಲ್ಲೇ ಪಾಪಿಗಳ ಚೆಂಡಾಡಿದ್ದೇವೆ..!

ಶ್ರೀನಗರದಲ್ಲಿ CRPF ಆಧಿಕಾರಿಗಳ ಸುದ್ದಿಗೋಷ್ಠಿ....

SHARE......LIKE......COMMENT......

ಶ್ರೀನಗರ:

ಪುಲ್ವಾಮಾ ದಾಳಿ ಹಿಂದಿನ ಉಗ್ರರನ್ನ ಭಾರತೀಯ ಸೇನೆ ಫಿನಿಶ್ ಮಾಡಿದೆ. ಕಳೆದ ನಾಲ್ಕು ದಿನದಿಂದ ಸೇನೆ ನಡೆಸಿರುವ ಆಪರೇಷನ್ ಬಗ್ಗೆ ಇಂದು ಶ್ರೀನಗರದಲ್ಲಿ  ಲೆಪ್ಟಿನೆಂಟ್​​ ಜನರಲ್ ಕೆಜಿಎಸ್​ ದಿಲ್ಹೋನ್ ಸುದ್ದಿಗೋಷ್ಠಿ ನಡೆಸಿ, ಕಳೆದ 100 ಗಂಟೆಯಲ್ಲೇ ಪುಲ್ವಾಮಾ ದಾಳಿಯ ಹಿಂದಿನ ರೋವಾರಿಗಳನ್ನ ಹತ್ಯೆ ಮಾಡಿದ್ಧೇವೆ. ನಮ್ಮ ಯೋಧರು ನಿರಂತರವಾಗಿ ಆಪರೇಷನ್ ಮಾಡಿ ಉಗ್ರರನ್ನ ಹುಡಿಕಿ ಹತ್ಯೆಗೈದಿದ್ದಾರೆ ಎಂದ್ರು.

ಅಬ್ದುಲ್​​ ಘಾಜಿ ಮತ್ತು ಕಮ್ರಾನ್​​​​​​ ಪಾಕ್​ನ ಐಎಸ್​ಐ ಮತ್ತು ಜೈಷ್ ಇ ಮೊಹ್ಮದ್ ಸಂಘಟನೆಯಿಂದ ತರಬೇತಿ ಪಡೆದುಕೊಂಡಿದ್ದರು. ಘಾಜಿ ಪುಲ್ವಾಮ ಘಟನೆಯ ಮಾಸ್ಟರ್​​​ ಮೈಂಡ್​ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ನಾವು ಕೆಲವು ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದೇವೆ. ಎಲ್ಲಾ ಮಾಹಿತಿಯನ್ನೂ ಈಗ ಬಹಿರಂಗ ಮಾಡೋದು ಸರಿಯಲ್ಲಿ ಎಂದು ಹೇಳಿದ್ರು. ಜೆಇಎಂ ಪಾಕ್ ಸೇನೆಯ ಶಿಶು ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಸಿಆರ್​ಪಿಎಫ್​ ಅಧಿಕಾರಿಗಳು ತಿಳಿಸಿದ್ದಾರೆ…