Breaking News

ಸೂರ್ಯ ದೇವರ ಅರಾಧನೆಗೆ ಯಾವ ಮುಹೂರ್ತ ಸೂಕ್ತ..?

ಯಾವ ವಿಧಿವಿಧಾನಗಳನ್ನ ಪಾಲಿಸಿದರೆ ದೋಷ ಪರಿಹಾರವಾಗುತ್ತೆ....

SHARE......LIKE......COMMENT......

ಧರ್ಮ-ಜ್ಯೋತಿ:

ಸೂರ್ಯಾರಾಧನೆಗೆ ರಥಸಪ್ತಮಿ ವಿಶೇಷ ಕಾಲ. ಅಂದು ಸೂರ್ಯನ ಕಿರಣಗಳಲ್ಲಿ ‘ಡಿ’ ಸತ್ವ ಹೆಚ್ಚಿರುವುದರಿಂದ ವೈಜ್ಞಾನಿಕವಾಗೂ ಮಹತ್ವ ಪಡೆದುಕೊಂಡಿದೆ. ರಥಸಪ್ತಮಿ ವೈಜ್ಞಾನಿಕವಾಗಿ ಹಾಗೂ ಚಾರಿತ್ರಿಕವಾಗಿಯೂ ಮಹತ್ವ ಹೊಂದಿದೆ. ಈ ಪುಣ್ಯ ಕಾಲದಲ್ಲಿ ಸೂರ್ಯನ ನಭೋಪ್ರಭಾವ ಮತ್ತು ಭೌತಿಕ ಛಾಯಾರೂಪ ಪೃಥ್ವಿಯ ಮೇಲೆ ಅಧಿಕವಾಗಿ ಎರಕ ಹೊಯ್ಯುತ್ತಿರುತ್ತದೆ. ಈ ಸಂದರ್ಭದಲ್ಲಿ ಮಾಘಸ್ನಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಸೌರಮಂಡಲದ ಅಧಿಪತಿ ಪೃಥ್ವಿಯಿಂದ 149.6 ಮಿಲಿಯನ್‌ ಕಿ.ಮೀ.ಗಳ ದೂರದಲ್ಲಿರುವ ಮಹಾನಕ್ಷತ್ರವೇ ಸೂರ್ಯ. ಸೂರ್ಯನಿಂದ ಹೊರ ಹೊಮ್ಮುವ ಬೆಳಕು ಒಂದು ಸೆಕೆಂಡಿಗೆ 299,792 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಪೃಥ್ವಿಯನ್ನು ತಲುಪಲು 8 ನಿಮಿಷ 30 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಸೂರ್ಯನ ಚಲನ ಸಿದ್ಧಾಂತದಿಂದಲೇ ಆಯನ ಮತ್ತು ಋುತುಗಳು ಸಂಭವಿಸುತ್ತವೆ.

ಸಪ್ತ ಚಕ್ರಗಳ ಪ್ರಭಾವ

ರಥಸಪ್ತಮಿಯಂದು ಹೊರಹೊಮ್ಮುವ ಸೂರ್ಯನ ಕಿರಣಗಳಲ್ಲಿ ಡಿ ಜೀವಸತ್ವ ಅಧಿಕ ವಾಗಿರುತ್ತದೆ. ‘ಡಿ’ ಜೀವಸತ್ವವು ಶಾರೀರಿಕ ಆರೋಗ್ಯಕ್ಕೆ ಮತ್ತು ಚಕ್ರಗಳ ಭೌತಿಕ ಕ್ರಿಯೆಗೆ ಪೂರಕವಾಗಿವೆ. ಹಾಗೆಂದೇ ಅಂದು ಸೂರ್ಯೋದಯದ ಸಂದರ್ಭದಲ್ಲಿ ಸೂರ್ಯ ನಮಸ್ಕಾರ, ಯೋಗ, ಮಾಘ ಸ್ನಾನವನ್ನು ಮಾಡುತ್ತಾರೆ. ಆ ಮೂಲಕ ಸೂರ್ಯನ ಕಿರಣ ಮೈಮೇಲೆ ಬೀಳುವಂತೆ ನೋಡಿಕೊಳ್ಳುತ್ತಾರೆ. ಮುಖ್ಯವಾಗಿ ಆಜ್ಞಾ ಚಕ್ರದ ಮೇಲೆ ಸೂರ್ಯನ ಕಿರಣಗಳು ಹೆಚ್ಚಿನ ಪ್ರಭಾವ ಬೀರುತ್ತವೆ. ಮೆದುಳಿನ ಹಿಂಬದಿಯಲ್ಲಿರುವ ಪೀನಲ್‌ ಗ್ರಂಥಿ ಶುದ್ಧಿಕರಣಗೊಂಡು ಮಾನಸಿಕ ಚಂಚಲತೆ ದೂರವಾಗುತ್ತದೆ.

ಸಪ್ತಾಘ್ನಿ ಪೂಜಾ ವಿಧಾನ

ರಥಸಪ್ತಮಿಯಂದು ಸೂರ್ಯೋದಯದ ಸಂದರ್ಭದಲ್ಲಿ ಸೂರ್ಯ ಕಿರಣ ಬೀರುವ ಸ್ಥಳದಲ್ಲಿ ಕೆಂಪು ವಸ್ತ್ರವನ್ನು ನೀಳವಾಗಿ ಹಾಸಬೇಕು. ಅದರ ಮೇಲೆ ಗೋಧಿಯನ್ನು ಹರವಬೇಕು. ಗೋಧಿಯ ಮೇಲ್ಬದಿಯಲ್ಲಿ 7 ಬಾಳೆ ಎಲೆಗಳನ್ನು ಹಾಕಿ ಅದರ ಮೇಲೆ ಅಕ್ಕಿಯನ್ನು ಹರುವಬೇಕು. ನಂತರ ಪ್ರತಿಯೊಂದು ಎಲೆಯ ಮೇಲೆ ಏಳು ಬಿಳಿ ಎಕ್ಕದ ಎಲೆಗಳನ್ನು ಇಡಬೇಕು. ಮುಂಬದಿಯಲ್ಲಿ ಏಳು ಮಣ್ಣಿನ ದೀಪಗಳನ್ನು ಹಚ್ಚಬೇಕು. ಅದನ್ನು ಬಿಳಿ ಎಕ್ಕದ ಹೂವು, ಚಪ್ಪರದ ಅವರೆ ಮತ್ತು ಕೆಂಪು ಗುಲಾಬಿಗಳಿಂದ ಅಲಂಕರಿಸಬೇಕು. ನಂತರ ಸೂರ್ಯ ಅಥವಾ ನಾರಾಯಣನ ವಿಗ್ರಹವನ್ನಿಟ್ಟು ಪೂಜಿಸುವುದು. ದೇವರಿಗೆ ನೈವೇದ್ಯವನ್ನು ಅರ್ಪಿಸಲು ಏಳು ತಟ್ಟೆಗಳನ್ನಿಟ್ಟು ಅದರಲ್ಲಿ ಬೆಲ್ಲ ಹಾಗೂ ಗೋಧಿಯಿಂದ ತಯಾರಿಸಲಾದ ಪಾಯಸವನ್ನು ನೈವೇದ್ಯವಾಗಿ ಸಮರ್ಪಿಸಬೇಕು. ನಂತರ ಏಳು ಅರ್ಕಪತ್ರಗಳನ್ನು ಶಿರಸ್ಸಿನ ಮೇಲಿಟ್ಟುಕೊಂಡು ಸ್ನಾನವನ್ನು ಮಾಡಬೇಕು. ತದನಂತರ ಸೂರ್ಯನ ಕಿರಣಗಳನ್ನು ವೀಕ್ಷಿಸಬೇಕು. ಸಪ್ತಾಘ್ನಿ ಪೂಜೆಯನ್ನು ಸಾಮೂಹಿಕವಾಗಿಯೂ ಮಾಡಬಹುದು.

ಯಾವ ವಿಧಿವಿಧಾನಗಳನ್ನ ಪಾಲಿಸಿದರೆ ದೋಷ ಪರಿಹಾರವಾಗುತ್ತೆ?

ದೋಷ ಪರಿಹಾರ

ಸಿಂಹ, ಕನ್ಯಾ, ಮೇಷ, ಮಕರ ಮತ್ತು ಕುಂಭರಾಶಿಯವರು ಶ್ರದ್ಧಾ ಭಕ್ತಿಯಿಂದ ಸಪ್ತಾಘ್ನಿ ಪೂಜೆಯನ್ನು ಆಚರಿಸಿ ವಸ್ತ್ರದಾನ ಮತ್ತು ಕನಕದಾನವನ್ನು ಮಾಡಿದರೆ ಶನಿ, ಕುಜ ಮತ್ತು ಕಾಳಸರ್ಪದೋಷಗಳು ದೂರವಾಗುತ್ತದೆ. ಕಂಕಣಭಾಗ್ಯ, ಸಂತಾನ ಯೋಗ ಲಭಿಸುವುದು.

ಎಕ್ಕೆ ಎಲೆಗಳ ಪ್ರಾಮುಖ್ಯತೆ

ಗಣಪತಿಯ ಪತ್ರ ಪೂಜೆಯಲ್ಲಿ ಎಕ್ಕೆ ಎಲೆಗಳು ಪವಿತ್ರವಾಗಿವೆ. ಸೂರ್ಯನಿಗೆ ಪ್ರಿಯಕರವಾದ ಪತ್ರೆ ಇದಾಗಿದೆ. ರಥ ಸಪ್ತಮಿಯಂದು ಬಿಳಿ ಎಕ್ಕೆಯ ಎಲೆಗಳನ್ನು ಈ ಭಾಗದಲ್ಲಿಟ್ಟುಕೊಂಡು ಸ್ನಾನ ಮಾಡಬೇಕು. ತಲೆ, ಭುಜ (ತಲಾ ಒಂದೊಂದು ಎಲೆ), ಕಾಲು (ತಲಾ ಒಂದೊಂದು), ಪಾದ (ತಲಾ ಒಂದೊಂದು) ಇಟ್ಟುಕೊಂಡು ಸ್ನಾನ ಮಾಡುವ ಪದ್ಧತಿಯಿದೆ……