Breaking News

ತಮಿಳುನಾಡಿನ ವೆಲ್ಲೂರು ಕ್ಷೇತ್ರದ ಎಲೆಕ್ಷನ್ ಕ್ಯಾನ್ಸಲ್​..!

11.5 ಕೋಟಿ ಐಟಿ ದಾಳಿಯಲ್ಲಿ ಸಿಕ್ಕಿದ ಹಿನ್ನಲೆ....

SHARE......LIKE......COMMENT......

ತಮಿಳುನಾಡು:

ತಮಿಳುನಾಡಿನ ವೆಲ್ಲೂರು ಲೋಕಸಭೆ ಕ್ಷೇತ್ರದ ಚುನಾವಣೆ ರದ್ದಾಗಿದೆ. ಮಾರ್ಚ್​ ಕೊನೆ ವಾರದಲ್ಲಿ ಡಿಎಂಕೆ ಪಕ್ಷದ ಅಭ್ಯರ್ಥಿ ಹಾಗೂ ದೊರೈ ಮುರುಗನ್ ಪುತ್ರ ಕಥೀರ್ ಆನಂದ್​ ನಿವಾಸದ ಮೇಲೆ ಐಟಿ ದಾಳಿ ನಡೆಸಿ ₹11.5 ಕೋಟಿ ಹಣವನ್ನು ವಶಪಡಿಸಿಕೊಂಡಿತ್ತು. ಹಣ ಸಿಕ್ಕ ಹಿನ್ನೆಲೆ ಚುನಾವಣಾ ಆಯೋಗ ಎಲೆಕ್ಷನ್ ರದ್ದುಗೊಳಿಸಿದೆ. ಮತದಾರರಿಗೆ ಹಣ ನೀಡಲು ಮುಂದಾಗಿದ್ದಾರೆ ಅನ್ನೋ ಆರೋಪದ ಮೇರೆಗೆ ಏಪ್ರಿಲ್​​​ 18 ರಂದು ನಡೆಯಬೇಕಿದ್ದ ವೆಲ್ಲೂರು ಕ್ಷೇತ್ರದ ಚುನಾವಣೆಯನ್ನು ರದ್ದುಗೊಳಿಸಿದ್ದಾರೆ. ಐಟಿ ಅಧಿಕಾರಿಗಳ ದೂರು ಆಧರಿಸಿ ಪರಿಶೀಲಿಸಿದ ಆಯೋಗ ಚುನಾವಣಾ ರದ್ದು ಮಾಡುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿತ್ತು. ಆಯೋಗದ ಶಿಫಾರಸಿಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ…..