ಮಂಡ್ಯ:
ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸುಮಲತಾ ಕಣಕ್ಕಿಳೀದಿರೋದು ಕೇವಲ ಕಾರ್ಯಕರ್ತರನ್ನಷ್ಟೇ ಅಲ್ಲ..ಸ್ಯಾಂಡಲ್ವುಡ್ನಲ್ಲೂ ಗೊಂದಲಕ್ಕೆ ಕಾರಣವಾಗಿದೆ. ಸ್ವತಃ ಸಿಎಂ ಪುತ್ರನೇ ಕಣಕ್ಕಿಳಿಯುತ್ತಿರೋದ್ರಿಂದ ಯಾರನ್ನು ಬೆಂಬಲಿಸಬೇಕು ಅನ್ನೋ ಜಿಜ್ಞಾಸೆ ಶುರುವಾಗಿದೆ. ಸುಮಲತಾ ಅಂಬರೀಶ್ ರಾಜಕೀಯ ಎಂಟ್ರಿ ಬಗ್ಗೆ ಕಿಚ್ಚ ಸುದೀಪ್ ಮೊದಲ ಬಾರಿಗೆ ಮಾತನಾಡಿದ್ದಾರೆ…ದರ್ಶನ್ ಇರುವಾಗ ಅಲ್ಲಿ ನಾನ್ಯಾಕೆ. ಕ್ಯಾಂಪೆನ್ ವಿಚಾರವಾಗಿ ನನಗೆ ಬುಲಾವ್ ಬಂದಿಲ್ಲ…ಬಂದರೆ ನಿಮಗೆ ಮೊದಲು ಹೇಳುತ್ತೇನೆ ಅಂದಿದ್ದಾರೆ…..