Breaking News

ರಾಜ್ಯೋತ್ಸವದ ದಿನ ಎಂಇಎಸ್​ ಕರಾಳ ದಿನಾಚರಣೆ..!

ಕುಂದಾನಗರಿ ಭಾರೀ ಬಂದೋಬಸ್ತ್​....

SHARE......LIKE......COMMENT......

ಬೆಳಗಾವಿ:

ಕನ್ನಡ ರಾಜ್ಯೋತ್ಸವದ ದಿನ ಎಂಇಎಸ್​ ಕರಾಳ ದಿನಾಚರಣೆಗೆ ಕರೆಕೊಟ್ಟಿರೋ ಹಿನ್ನೆಲೆಯಲ್ಲಿ ಕುಂದಾನಗರಿ ಭಾರೀ ಬಂದೋಬಸ್ತ್​ ಮಾಡಲಾಗಿದೆ. ನವೆಂಬರ್​​​ 1ರಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದ ಏಳು ವಲಯಗಳಿಂದ 800ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಕಮಲ್​​​ ಪಂತ್ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ನಗರ ಪೊಲೀಸ್ ಆಯುಕ್ತ, ಎಸ್​ಪಿಯ ಮೇಲುಸ್ತುವಾರಿಯಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. 6 ಡಿಎಸ್​ಪಿಗಳು, 20 ಸಬ್​​ಇನ್ಸ್​ಪೆಕ್ಟರ್​​ಗಳು, 52 ಪಿಎಸ್​ಐಗಳು, 70 ಎಎಸ್​ಐಗಳು, 700 ಪೇದೆಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ನಾಳೆಯಿಂದಲೇ ಪೊಲೀಸರು ಬೆಳಗಾವಿ ನಗರಕ್ಕೆ ಆಗಮಿಸಲಿದ್ದಾರೆ…….