Breaking News

ಮೈಸೂರು ಬೇಕೇ ಬೇಕೆಂದು ಪಟ್ಟು ಹಿಡಿದ ದೇವೇಗೌಡರು..!?

ಮೈಸೂರು ಬಿಟ್ಟರೆ ಕಾಂಗ್ರೆಸ್​ ಸರ್ವನಾಶ ಎಂದ ಸಿದ್ದು....

SHARE......LIKE......COMMENT......

ಮೈಸೂರು:

ಮೈಸೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್​-ಜೆಡಿಎಸ್​ ದೋಸ್ತಿಗೆ ಕಂಟಕವಾಗೋ ಲಕ್ಷಣ ಕಾಣ್ತಿದೆ. ಮೈಸೂರು ಬೇಕೇ ಬೇಕೆಂದು ದೇವೇಗೌಡರು ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಮೈಸೂರು ಕೊಟ್ಟರೆ ಕಾಂಗ್ರೆಸ್​ ಸರ್ವನಾಶ ಎನ್ನುತ್ತಿದ್ದಾರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ. ಹೀಗಾಗಿ ಮೈಸೂರು ಕ್ಷೇತ್ರ ಬಿಟ್ಟುಕೊಡುವಂತೆ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಮುಂದೆ ಜೆಡಿಎಸ್​ ಸಮನ್ವಯ ಸಮಿತಿ ಸದಸ್ಯ ಡ್ಯಾನಿಷ್​ ಅಲಿ ಪಟ್ಟು ಹಿಡಿದಿದ್ದಾರೆ.

12 ಕ್ಷೇತ್ರದಿಂದ 10 ಕ್ಷೇತ್ರಕ್ಕೆ ನಾವು ಸಮಾಧಾನ ಪಟ್ಟುಕೊಂಡಿದ್ದೇವೆ. 8 ಕ್ಷೇತ್ರಗಳನ್ನು ಕೊಟ್ಟರೂ ಒಪ್ಪಿಕೊಳ್ಳುತ್ತೇವೆ ಆದ್ರೆ ಮೈಸೂರು ಬಿಟ್ಟುಕೊಡಿ ಎಂದು ಡ್ಯಾನಿಶ್ ಅಲಿ ಎಐಸಿಸಿ ಅಧ್ಯಕ್ಷರ ಮುಂದೆ ಆಗ್ರಹಿಸಿದ್ದಾರೆ. ಹೀಗಾಗಿ ಮೈಸೂರು ಕ್ಷೇತ್ರ ಜೆಡಿಎಸ್​ಗೆ ಸಿಗದೇ ಹೋದ್ರೆ ಮೈತ್ರಿ ಖತಂ ಆಗೋ ಲಕ್ಷಣ ಕಾಣುತ್ತಿವೆ…….