Breaking News

‘ದೋಸ್ತಿ’ ಸರ್ಕಾರಕ್ಕೆ ಸಂಪುಟ ಸಂಕಟ..!

ಕಾಂಗ್ರೆಸ್​ನಲ್ಲಿ ಬಂಡಾಯದ ಜ್ವಾಲೆ.....

SHARE......LIKE......COMMENT......

ಬೆಂಗಳೂರು:

ದೋಸ್ತಿ ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದ ಸಚಿವ ಸಂಪುಟ ಇಂದು ಕೊನೆಗೂ ವಿಸ್ತರಣೆಯಾಗಿದೆ. . ಕಾಂಗ್ರೆಸ್​​ನ 8 ಶಾಸಕರಿಗೆ ಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ರು. ಸಂಜೆ 5.30ಕ್ಕೆ ದ ಗ್ಲಾಸ್​ ಹೌಸ್​​ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ನೂತನ ಸಚಿವರಿಗೆ ಪ್ರತಿಜ್ಞಾವಿಧಿಯನ್ನ ಬೋಧಿಸಿದ್ರು.

ಬಬಲೇಶ್ವರ ಶಾಸಕ, ಮಾಜಿ ಸಚಿವ ಎಂ.ಬಿ.ಪಾಟೀಲ್, ವಿಧಾನ ಪರಿಷತ್ ಸದಸ್ಯ ಆರ್​.ಬಿ. ತಿಮ್ಮಾಪುರ, ಶಾಸಕ ಸತೀಶ್​ ಜಾರಕಿಹೊಳಿ, ಸಿ.ಎಸ್​. ಶಿವಳ್ಳಿ, ಪಿ.ಟಿ. ಪರಮೇಶ್ವರ್​ನಾಯ್ಕ್​, ಇ. ತುಕಾರಾಂ, ಎಂಟಿಬಿ ನಾಗರಾಜ್​​ ರಹೀಂ ಖಾನ್ ಸಚಿವರಾಗಿ ಪದಗ್ರಹಣ ಮಾಡಿದ್ರು.

ಇತ್ತ ನೂತನವಾಗಿ ಪ್ರಮಾಣವಚನ ಸ್ವೀಕರಿಸಿ ಸಂಭ್ರಮದಲ್ಲಿ ಮಂತ್ರಿಗಳಿದ್ರೆ ಅತ್ತ”>ಕಡೆ ಸಚಿವ ಸ್ಥಾನ ಕೈ ತಪ್ಪಿದ ಬಂಡಾಯದ ಶಾಸಕರು ಕೆಂಡಕಾರುತ್ತಿದ್ರು.ಹಿರೇಕೆರೂರು ಶಾಸಕ ಬಿ.ಸಿ ಪಾಟೀಲ್​ಗೂ ಮಿನಿಸ್ಟರ್​ ಸೀಟ್ ಮಿಸ್ ಆಗಿದೆ. ಮಂತ್ರಿಗಿರಿ ಸಿಗದಿರೋದಕ್ಕೆ ಬಿಸಿ ಪಾಟೀಲ್ ಸೇರಿದಂತೆ ಬೆಂಬಲಿಗರೂ ಕೂಡಾ ಸಿಡಿಮಿಡಿಗೊಂಡಿದ್ದಾರೆ. ಮಾಜಿ ಸಚಿವ ರಾಮಲಿಂಗಾರೆಡ್ಡಿಗೂ ಈ ಬಾರಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಕ್ಕಿಲ್ಲ..ಇದ್ರಿಂದ  ರೆಡ್ಡಿ ಬೆಂಬಲಿಗರು ಬೆಂಗಳೂರಿನ ಕೆಪಿಸಿಸಿ ಎದುರು ಪ್ರತಿಭಟನೆ ನಡೆಸಿದ್ರು.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್, ಕಲಬುರ್ಗಿ ಜೇವರ್ಗಿ ಕ್ಷೇತ್ರದಲ್ಲಿ ಶಾಸಕ ಅಜಯ್ ಸಿಂಗ್​, ಗೆ ಸಚಿವ ಸ್ಥಾನ ತಪ್ಪಿರೋದಕ್ಕೆ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ.ಕಲಬುರ್ಗಿ ಶಾಸಕ ಎಂ.ವೈ ಪಾಟೀಲ್ ಸಚಿವ ಸ್ಥಾನ ಕೈ ತಪ್ಪಿದೆ. ರಾಯಚೂರಿನ ಮಸ್ಕಿ ಶಾಸಕ ಪ್ರತಾಪ್​ ಗೌಡ ಪಾಟೀಲ್, ಹಾಗೂ   ಶಾಸಕ ಲಂಬಾಣಿ ಸಮುದಾಯದ ಉಮೇಶ್​ ಜಾಧವ್​ಗೂ  ಕೂಡಾ ಗರಂ ಆಗಿದ್ದಾರೆ……