ತಿರುಮಲ/ತಿರುಪತಿ:
ನವರಾತ್ರಿಯ ಬ್ರಹ್ಮೋತ್ಸವಂ ಸಂದರ್ಭದಲ್ಲಿ ಗರುಡ ಸೇವೆಗೆ ಅತ್ಯಂತ ಹೆಚ್ಚಿನ ಸಂಖ್ಯೆಯ ಭಕ್ತರು ದೇಗುಲಕ್ಕೆ ಆಗಮಿಸಿದ್ದರಿಂದ ಭಕ್ತರ ಅನುಕೂಲಕ್ಕಾಗಿ 100 ಮತ್ತು 50 ಮುಖಬೆಲೆಯ ಟೋಕನ್ಗಳನ್ನು ನೇರವಾಗಿ ವಿತರಿಸಲಾಗಿತ್ತು. 100 ಮತ್ತು 50 ಮುಖಬೆಲೆಯ ಟೋಕನ್ಗಳಿಗೆ ಕ್ರಮವಾಗಿ ನಾಲ್ಕು ಮತ್ತು ಎರಡು ಲಡ್ಡು ದೊರೆಯುತ್ತದೆ.
ಲಡ್ಡು ವಿತರಣಾ ಕೌಂಟರ್ನಲ್ಲಿದ್ದ ಕಾಂಟ್ರಾಕ್ಟ್ ಉದ್ಯೋಗಿಗಳು ಎಂಟ್ರಿ ಆಗಿರದ ಟೋಕನ್ಗಳನ್ನ ಭಕ್ತರಿಂದ ಪಡೆದುಕೊಂಡು ಅವರಿಗೆ ಲಡ್ಡು ವಿತರಿಸಿದ್ದಾರೆ. ಬಳಿಕ ಸಂಗ್ರಹವಾದ 30,000 ಲಡ್ಡು ಟೋಕನ್ಗಳನ್ನು ನೀಡಿ ದಾಸ್ತಾನಿನಿಂದ ಲಡ್ಡು ಪಡೆದುಕೊಂಡಿದ್ದಾರೆ. ನಂತರ ಹೆಚ್ಚುವರಿಯಾಗಿ ದೊರೆತ ಲಡ್ಡುಗಳನ್ನು ಕಾಳಸಂತೆಯಲ್ಲಿ ದುಬಾರಿ ದರಕ್ಕೆ ಮರಾಟ ಮಾಡಿದ್ದಾರೆ ಎಂದು ಪತ್ತೆಯಾಗಿದೆ.
ಸುಮಾರು 14,000 ಲಡ್ಡು ಹೆಚ್ಚುವರಿಯಾಗಿ ಲಡ್ಡು ವಿತರಣಾ ಕೌಂಟರ್ನ ಕಾಂಟ್ರಾಕ್ಟ್ ಉದ್ಯೋಗಿಗಳಿಗೆ ದೊರೆತಿದ್ದು, ಅದನ್ನು ಹೊರಗಡೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ……