Breaking News

ತಾಯ್ನಾಡಿಗೆ ವಿಂಗ್​ ಕಮಾಂಡರ್..

ಅಭಿನಂದನೆಯ ಮಹಾಪೂರ....

SHARE......LIKE......COMMENT......

ನವದೆಹಲಿ: 

ಭಾರತದ ಗಡಿಯತ್ತ ಬರುತ್ತಿದ್ದ ಪಾಕಿಸ್ತಾನದ ಜೆಟ್​ ವಿಮಾನವನ್ನು ಬೆನ್ನಟ್ಟಿ ಹೋಗಿ ಪಾಕ್​ ಸೇನೆಯ ವಶವಾಗಿದ್ದ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರು ಶುಕ್ರವಾರ ರಾತ್ರಿ 9.15ರ ಸುಮಾರಿಗೆ ಅಟಾರಿ-ವಾಘಾ ಗಡಿ ಭಾರತಕ್ಕೆ ಆಗಮಿಸಿದರು. ಪಾಕಿಸ್ತಾನ ಸೇನೆಯ ಅಧಿಕಾರಿಗಳು ಅಭಿನಂದನ್​ ಅವರನ್ನು ಭಾರತದ ಸೇನೆಯ ಅಧಿಕಾರಿಗಳಿಗೆ ಒಪ್ಪಿಸಿದರು.

ಪಾಕಿಸ್ತಾನದ ಲಾಹೋರ್​ನಿಂದ ರಸ್ತೆ ಮಾರ್ಗವಾಗಿ ಬೆಂಗಾವಲು ಪಡೆಯ ವಾಹನಗಳೊಂದಿಗೆ ಪಾಕ್​ ಸೇನೆ​ ಅಭಿನಂದನ್​ ಅವರನ್ನು ಕರೆತಂದಿತು. ಬಳಿಕ ಹಸ್ತಾಂತರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಬೀಳ್ಕೊಟ್ಟರು. ಈ ವೇಳೆ ಧೀರ ಪೈಲಟ್​ ಅಭಿನಂದನ್​ರನ್ನು ವಾಯುಪಡೆಯ ಅಧಿಕಾರಿಗಳು ಸಂತಸದಿಂದ ಬರಮಾಡಿಕೊಂಡರು. ಗಡಿಯಲ್ಲಿ ನೆರೆದಿದ್ದ ದೇಶದ ನಾಗರಿಕರು ಜೈಕಾರ ಕೂಗುವ ಮೂಲಕ ಅಭಿನಂದನ್​ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು……