Breaking News

ಬಿಎಂಟಿಸಿ ಬಸ್​ ಮೇಲೆ ಕಿಡಿಗೇಡಿಗಳಿಂದ ಕಲ್ಲು ಎಸೆತ..!

ಸಂಚಾರ ಸಂಪೂರ್ಣ ಸ್ಥಗಿತ ಯಶವಂತಪುರ ಮಾರುಕಟ್ಟೆ ಖಾಲಿ ಖಾಲಿ.....

SHARE......LIKE......COMMENT......

ಬೆಂಗಳೂರು:

ಭಾರತ್​ ಬಂದ್​ಗೆ ಬೆಳಗ್ಗೆಯಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲೂ ಪ್ರತಿಭಟನಾಕಾರರು ನಸುಕಿನಲ್ಲೇ ರಸ್ತೆಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.ಇದರ ಮಧ್ಯೆ ಬಿಎಂಟಿಸಿ ಬಸ್​ಗೆ ಕಿಡಿಗೇಡಿಗಳಿಂದ ಕಲ್ಲು ಎಸೆದಿರುವ ಘಟನೆ ನಡೆದಿದೆ. ಮಲ್ಲೇಶ್ವರಂ ಎಂಟನೇ ಕ್ರಾಸ್​ನಲ್ಲಿ ಈ ಘಟನೆ ನಡೆದಿದ್ದು, ಪೀಣ್ಯದಿಂದ ಮೆಜೆಸ್ಟಿಕ್ ಮಾರ್ಗದಲ್ಲಿ ಬರುತ್ತಿದ್ದ ಬಸ್​ ನಂಬರ್​ 252 ನಂಬರಿನ ಬಸ್ ಮೇಲೆ ಕಲ್ಲು ಎಸೆಯಲಾಗಿದೆ.

ಇನ್ನು ಭಾರತ್ ಬಂದ್ ಹಿನ್ನಲೆಯಲ್ಲಿ ನಗರದಲ್ಲಿ ಬಸ್​ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಯಶವಂತಪುರ ಮಾರುಕಟ್ಟೆ ಖಾಲಿ ಖಾಲಿ ಹೊಡೆಯುತ್ತಿದೆ. ರೈಲ್ವೇ ನಿಲ್ದಾಣದಲ್ಲಿ ಆಟೋಗಳ ಸಂಚಾರ ಮಾತ್ರ ಕಂಡು ಬರುತ್ತಿದೆ……