Breaking News

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಜಯ್ ಸಿಂಗ್ ಸೇಡು ..!

ಜಾಧವ್ ಪೋಸ್ಟ್​ಗೆ ‘Great Jadhav ji' ಅಂತಾ ಕಮೆಂಟ್....

SHARE......LIKE......COMMENT......

ಬೆಂಗಳೂರು:

ಕಲಬುರಗಿಯಲ್ಲಿ ಲೋಕಸಭಾ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಅಜಯ್​ ಸಿಂಗ್ ಕೈ ಕೊಡ್ತಾರಾ ​ಅನ್ನೋ ಪ್ರಶ್ನೆ ಉದ್ಭವಿಸಿದೆ. ತಮ್ಮ ತಂದೆ, ಮಾಜಿ ಸಿಎಂ ಧರ್ಮಸಿಂಗ್ ಜಿಗರಿ ದೋಸ್ತ್ ಖರ್ಗೆ ವಿರುದ್ಧ ಜೇವರ್ಗಿ ಶಾಸಕ ಅಜಯ್​ ಸಿಂಗ್​ ಸಿಡಿದೆದ್ದಿದ್ದಾರಾ ಅನ್ನೋ ಅನುಮಾನಗಳು ಮೂಡಿವೆ.

ಇದಕ್ಕೆ ಪುಷ್ಠಿ ನೀಡುವಂತೆ ಫೇಸ್​ಬುಕ್​ನಲ್ಲಿ ಉಮೇಶ್​ ಜಾಧವ್​ರನ್ನು ಬೆಂಬಲಿಸಿ ಅಜಯ್​ ಸಿಂಗ್​​ ಕಮೆಂಟ್​ ಮಾಡಿದ್ದಾರೆ. ‘ನನ್ನ ಬಳಿಯೂ ಅಸ್ತ್ರಗಳಿವೆ.. ಟೈಮ್​ ಬಂದಾಗ ಪ್ರಯೋಗಿಸುತ್ತೇನೆ’ ಅಂತಾ ಉಮೇಶ್​ ಜಾಧವ್​ ಫೇಸ್​ಬುಕ್​ನಲ್ಲಿ ಪೋಸ್ಟ್​​ ಮಾಡಿದ್ರು. ಜಾಧವ್​ ಪೋಸ್ಟ್​ಗೆ ಕಮೆಂಟ್​ ಮಾಡಿರೋ ಅಜಯ್​ ಸಿಂಗ್​, ‘ಗ್ರೇಟ್​ ಜಾಧವ್​ ಜೀ’ ಅಂತಾ ಹೇಳಿದ್ದಾರೆ. ಈ ಕಮೆಂಟ್​ ಸಧ್ಯ ಕಾಂಗ್ರೆಸ್​ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಅಜಯ್​ ಸಿಂಗ್​ ಖರ್ಗೆಗೆ ಕೈಕೊಟ್ಟು ಜಾಧವ್​ ಬೆಂಬಲಕ್ಕೆ ನಿಲ್ತಾರಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ………..

ಈ ಮಧ್ಯೆ ಕಲಬುರ್ಗಿಯಲ್ಲಿ ಉಮೇಶ್ ಜಾಧವ್ ಹವಾ ಎದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಡಾ.ಉಮೇಶ್ ಜಾಧವ್ ಪರ ಹೆಚ್ಚಿನ ಒಲವು ವ್ಯಕ್ತವಾಗ್ತಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ.ಉಮೇಶ್ ಜಾಧವ್ ಬೆಂಬಲಿಗರಿಂದ ಫೇಸ್‌ಬುಕ್ ಪೋಲ್​ನಲ್ಲಿ ಜಾಧವ್ ಪರ ವೋಟ್ ಬೀಳ್ತಿವೆ. ಅಷ್ಟೆ ಅಲ್ಲ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ಮಾಡಿರುವ ಪೋಲ್‌ನಲ್ಲೂ ಜಾಧವ್​ ಪರವೇ ಒಲವು ವ್ಯಕ್ತವಾಗಿದೆ……