Breaking News

ಸಿಎಂ ಮಧ್ಯಾಹ್ನ ದಾವೋಸ್ ಭೇಟಿ ಬಗ್ಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ..!

ದಾವೋಸ್​ ಭೇಟಿ ಫಲಶೃತಿಯ ಬಗ್ಗೆ ಮಾಹಿತಿ....

SHARE......LIKE......COMMENT......

ಬೆಂಗಳೂರು :

ಸಿಎಂ ಬಸವರಾಜು ಬೊಮ್ಮಾಯಿ ಅವರು ದಾವೋಸ್​ನಿಂದ ವಾಪಸ್​ ಆಗಿದ್ದು, ದೇವನಹಳ್ಳಿ ಏರ್​​​ಪೋರ್ಟ್​ಗೆ ಬಂದಿಳಿದಿದ್ದಾರೆ. ಸಿಎಂ ಮಧ್ಯಾಹ್ನ ದಾವೋಸ್ ಭೇಟಿ ಬಗ್ಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸಿಎಂ ಬೊಮ್ಮಾಯಿ ಮೇ 22ರಂದು ದಾವೋಸ್​ಗೆ ತೆರಳಿದ್ದರು. ಸ್ವಿಟ್ಜರ್​​​​ಲ್ಯಾಂಡ್​ನ ದಾವೋಸ್​ನಲ್ಲಿ ಸಮ್ಮೇಳನ ನಡೆದಿತ್ತು. ಆರ್ಥಿಕ ಶೃಂಗ ಸಮ್ಮಿಟ್​ನಲ್ಲಿ ಸಿಎಂ ಭಾಗಿಯಾಗಿದ್ದರು. ಹಲವು ಕಂಪನಿಗಳ ಜತೆ ಮಾತುಕತೆ ನಡೆಸಿದ್ದರು. ಕರ್ನಾಟಕದಲ್ಲಿ ಹೂಡಿಕೆ ಮಾಡುವ ಸಂಬಂಧ ಮಾತುಕತೆ ನಡೆಸಿದ್ದಾರೆ. ಸಿಎಂಗೆ ಡಾ.ಅಶ್ವಥ್​​ ನಾರಾಯಣ್​​​, ಮುರುಗೇಶ್​ ನಿರಾಣಿ ಸಾಥ್​ ನೀಡಿದ್ದರು.ಮಧ್ಯಾಹ್ನ ದಾವೋಸ್ ಭೇಟಿ ಬಗ್ಗೆ ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ದಾವೋಸ್​ ಭೇಟಿ ಫಲಶೃತಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ……