ಮಹಾರಾಷ್ಟ್ರ:
ಮಹಾ ಹೈಡ್ರಾಮಾ ಇಂದು ಕ್ಲೈಮ್ಯಾಕ್ಸ್ ಅಂತ ತಲುಪುವ ಸಾಧ್ಯತೆಯಿದೆ. ಏಕನಾಥ ಶಿಂದೆ ನಮ್ಮ ನಾಯಕ ಎಂದು ಡೆಪ್ಯೂಟಿ ಸ್ಪೀಕರ್ ನರಹರಿ ಜಿರ್ವಾಲ್ಗೆ ಶಿವಸೇನೆಯ 37 ಶಾಸಕರು ಅಸ್ಸಾಂನ ಗುವಾಹಟಿ ಱಡಿಸನ್ ಹೋಟೆಲ್ನಿಂದ ಪತ್ರ ಬರೆದಿದ್ದಾರೆ. ನಮ್ಮದೇ ಬಾಳಾ ಸಾಹೇಬ ಕಟ್ಟಿದ ನಿಜವಾದ ಶಿವಸೇನೆ ಏಕನಾಥ್ ಶಿಂಧೆ ನಮ್ಮ ನಾಯಕ ಎಂದು ಉಪಸಭಾಧ್ಯಕ್ಷಗೆ ಪತ್ರದಲ್ಲಿ ಶಾಸಕರು ಉಲ್ಲೇಖಿಸಿದ್ದಾರೆ.
ಸದ್ಯ ಸಿಎಂ ಉದ್ಧವ್ ಠಾಕ್ರೆ ಬಳಿ ಕೇವಲ 12 ಮಂದಿ ಶಾಸಕರ ಬೆಂಬಲವಿದ್ದು, ಶಿಂಧೆ ಟೀಂ ಸರ್ಕಾರ ರಚಿಸಲು ಬಿಜೆಪಿ ಸಾಥ್ ನೀಡೋ ತಯಾರಿ ಕೂಡ ನಡೆಯುತ್ತಿದೆ, ಮತ್ತೊಂದೆಡೆ ಶಿಂಧೆ ಟೀಂ ಅನರ್ಹತೆಗೆ ಶಿವಸೇನೆ ಪ್ಲಾನ್ ಮಾಡುತ್ತಿದೆ, ಒಟ್ಟಿನಲ್ಲಿ ಸಂಜೆವರೆಗೆ ಮಹಾ ಹೈಡ್ರಾಮಾ ಕ್ಲೈಮ್ಯಾಕ್ಸ್ ತಲುಪುವ ಸಾಧ್ಯತೆಯಿದೆ…..