Breaking News

ಮುರುಘಾಶ್ರೀಗಳ ದೌರ್ಜನ್ಯ ಪ್ರಕರಣಗಳು ಮತ್ತಷ್ಟು ಬಯಲಾಗುವ ಸಾಧ್ಯತೆ..!

ಸಿಬಿಐ ತನಿಖೆಗೆ ಒಪ್ಪಿಸಬೇಕು....

SHARE......LIKE......COMMENT......

ಮೈಸೂರು :

ಮುರುಘಾಶ್ರೀಗಳ ದೌರ್ಜನ್ಯ ಪ್ರಕರಣಗಳು ಮತ್ತಷ್ಟು ಬಯಲಾಗುವ ಸಾಧ್ಯತೆಯಿದ್ದು, ಸರ್ಕಾರ ಜಡ್ಜ್​ ಅಥವಾ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶು ಆಗ್ರಹಿಸಿದ್ಧಾರೆ. ಮೈಸೂರಿನಲ್ಲಿ ಮಾತನಾಡಿದ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶು ಅವರು ಚಿತ್ರದುರ್ಗದ CWC, ಪೊಲೀಸರ ಮೇಲೆ ಪೋಷಕರಿಗೆ ವಿಶ್ವಾಸವಿಲ್ಲ. ಪೋಷಕರು ಒಡನಾಡಿ ಸಹಾಯ ಪಡೆದು ದೂರು ಕೊಡುತ್ತಿದ್ದಾರೆ. ಶ್ರೀಗಳ ದೌರ್ಜನ್ಯ ಪ್ರಕರಣಗಳು ಇಲ್ಲಿಗೆ ನಿಲ್ಲುವಂತೆ ಕಾಣುತ್ತಿಲ್ಲ. ಮಠದ ಆಶ್ರಯದಲ್ಲಿ ಎಷ್ಟೋ ಮಕ್ಕಳು ಕಾಣೆಯಾಗಿದ್ದಾರೆ. ಕೆಲವು ಮಕ್ಕಳು ಸತ್ತಿರಲೂ ಬಹುದು ಎಂದು ಪರಶು ಗಂಭೀರ ಆರೋಪ ಮಾಡಿದ್ದಾರೆ. ಶ್ರೀಗಳನ್ನು ಜೈಲಿಗಟ್ಟಿದರೆ ಸಾಲದು, ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಸಿಬಿಐ ತನಿಖೆ ಮಾಡಿದ್ರೆ ಸತ್ಯ ಹೊರಬರುತ್ತೆ ಎಂದು ಪರಶು ಆಗ್ರಹಿಸಿದ್ಧಾರೆ……