Breaking News

ವಿಷ್ಣು ಪ್ರತಿಮೆ ಒಡೆದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್​​​..!

ಬದುಕಬೇಕು ಅಂದ್ರೆ ದೇಶವನ್ನೇ ಬಿಟ್ಟು ಹೋಗ್​ ಬಿಡಿ....

SHARE......LIKE......COMMENT......

ಸ್ಯಾಂಡಲ್‌ವುಡ್:

ವಿಷ್ಣು ಪ್ರತಿಮೆ ಒಡೆದವರಿಗೆ ಕಿಚ್ಚ ಸುದೀಪ್​​​ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ,ಕೈಗೆ ಸಿಕ್ಕಿದ್ರೆ ಪ್ರತಿಮೆಗಾದ ಸ್ಥಿತಿಗಿಂತಲೂ ಹೀನಾಯ ಸ್ಥಿತಿ ಆಗುತ್ತೆ ಎಂದು ಟ್ವೀಟ್ ಮಾಡಿ ವಿಡಿಯೋ ರಿಲೀಸ್ ಮಾಡಿದ್ದಾರೆ. “ಒಡೆದು ಹಾಕಿರೋ ಆ ಮಹಾನುಭಾವರಿಗೆ ಒಂದು ವಿಷಯ ಹೇಳೋಕೆ ಇಷ್ಟಾ ಪಡ್ತೀನಿ,ದಯವಿಟ್ಟು ಯಾರೂ ಸಿಗಾಕ್ಕೋಬೇಡಿ ,ಸಿಗಾಕ್ಕೊಂಡರೆ, ಒಡೆದಿರೋದು ಯಾರು ಅಂತಾ ಗೊತ್ತಾದ್ರೆ ,ಅಷ್ಟು ಜನ ಅಭಿಮಾನಿಗಳನ್ನು ಸಂಪಾದಿಸಿದ್ದಾರಲ್ಲಾ ಅವರು ಅದಕ್ಕಿಂತ ಹೀನಾಯವಾಗಿ ನಿಮ್ಮನ್ನ ಒಡೆದು ಹಾಕ್ತಾರೆ. ನೀವು ಒಡೆದು ಹಾಕಿರೋ ಉದ್ದೇಶ ಅರ್ಥ ಆಗಲ್ಲ, ಅರ್ಥ ಆಗೋಕೂ ಸಾಧ್ಯ ಇಲ್ಲ,ಮನುಷ್ಯರಾದವರಿಗೆ ಅದು ಅರ್ಥ ಆಗಲ್ಲ,ನೀವು ಎಲ್ಲೇ ಕೂತಿದ್ರೂ ಸಿಗಾಕ್ಕೊಳ್ಳದಿರಿ,ನಿಮ್ಮ ಹೆಸರು ಹೊರಗೆ ಬಂದ ದಿನ ಏನ್​​ ನಡೆಯುತ್ತೆ ಅದನ್ನು ಖಂಡಿತವಾಗಿ ಯಾರೂ ಹೇಳಕ್ಕಾಗಲ್ಲ,ಆ ಮೂರ್ತಿ ಒಡೆಯೋಕ್ಕಿಂತ ಮುಂಚೆ ಒಂದು ಕ್ಷಣ ನೀವು ಯೋಚ್ನೆ ಮಾಡಬೇಕಿತ್ತು,ಒಬ್ಬ ಮನುಷ್ಯನಾಗಿ ಮಾಡೋ ಕೆಲಸ ಅಲ್ಲವೇ ಅಲ್ಲ ಅದು ಎಂಥವರು ಮಾಡೋದು ಅಂದ್ರೆ ಬಾಯಲ್ಲೂ ಅದನ್ನು ಹೇಳೋಕಾಗಲ್ಲ. ಹೆಸರು ಗೊತ್ತಾದ ದಿನ ದಯವಿಟ್ಟು ದೇಶ ಬಿಟ್ಟು ಹೊರಗೆ ಹೋಗಿಬಿಡಿ,ಇದು ನಾನುನಿಮಗೆ ಕೊಡ್ತಿರೋ ಅಡ್ವೈಸ್​,ಆ ಮೂರ್ತಿ ಏನ್​ ಬಿಡಿ ಅದರ ಅಪ್ಪನಂತಿರೋ ಮೂರ್ತಿ ಇನ್ನೊಂದು ಕಟ್ತೀವಿ”…ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ……