Breaking News

ಕಿಚ್​​ಗುತ್ತಿ ವಿಷ ಪ್ರಸಾದ ದುರಂತಕ್ಕೆ ಮತ್ತೊಂದು ಬಲಿ..!

ಸಾವಿನ ಸಂಖ್ಯೆ 17ಕ್ಕೆ ಏರಿಕೆ....

SHARE......LIKE......COMMENT......

ಮೈಸೂರು:

ಸುಳ್ವಾಡಿ ಮಾರಮ್ಮ ವಿಷ ಪ್ರಸಾದ ದುರಂತ ಇಲ್ಲಿವರೆಗೂ17 ಮಂದಿಯನ್ನು ಅಫೋಷನ ತೆಗೆದುಕೊಂಡಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಅಸ್ವಸ್ಥರು ದಿನಕ್ಕೊಬ್ಬರಂತೆ ಸಾವಿಗೀಡಾಗ್ತಿದ್ದಾರೆ. ಇನ್ನು ಹಲವರ ಸ್ಥಿತಿ ಗಂಭೀರವಾಗಿಯೇ ಇದೆ.

ಪ್ರಸಾದ ತಿಂದು ಮೈಸೂರಿನ ಸುಯೋಗ್​ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 45 ವರ್ಷದ ರಂಗನ್ ಇಂದು ಸಾವನ್ನಪ್ಪಿದ್ದಾರೆ.ರಂಗನ್​ಗೆ ಇಬ್ಬರು ಹೆಣ್ಣು ಮಕ್ಕಳಿದ್ರು. ರಂಗನ್​ ಹೆಂಡತಿ, ಮಗು ಕೂಡಾ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸೆಂಬರ್14ರಂದು ರಂಗನ್​ ಮಾರ್ಗ ಮಧ್ಯೆ ಇದ್ದ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಕಾಡಿಗೆ ಹೋಗಿದ್ರು. ಗ್ರಾಮದ ಜನತೆ ಅಸ್ವಸ್ಥರಾಗ್ತಿದ್ದಂತೆ ಕುಟುಂಬಸ್ಥರು ರಂಗನ್​ರನ್ನು ಕಾಡಿಂದ ಕರೆಸಿಕೊಂಡು ಆಸ್ಪತ್ರೆಗೆ ದಾಖಲಿಸಿದ್ರು. ಆದ್ರೆ ರಂಗನ್ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಇನ್ನು ದುರಂತಕ್ಕೆ ಕಾರಣರಾದ ಸಾಲೂರು ಮಠದ ಇಮ್ಮಡಿ ಮಹದೇವ ಸ್ವಾಮಿ, ಮಾರಮ್ಮ ದೇವಾಲಯದ ಮ್ಯಾನೇಜರ್​ ಮಾದೇಶ ಹಾಗೂ ಈತನ ಪತ್ನಿ ಅಂಬಿಕಾ ಹಾಗೂ ಅರ್ಚಕ ದೊಡ್ಡಯ್ಯ ಅವರನ್ನು ನಿನ್ನೆ ಮಧ್ಯರಾತ್ರಿ ಕೊಳ್ಳೇಗಾಲ ನ್ಯಾಯಾಧೀಶರ ಎದುರು ಹಾಜರುಪಡಿಸಿಲಾಗಿತ್ತು. ನ್ಯಾಯಾಧೀಶರು ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಹಿನ್ನೆಲೆ ಇಂದು ಮುಂಜಾನೆ ನಾಲ್ವರನ್ನು ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ತರಲಾಯಿತು……..