Breaking News

20-MAR-2019 ನಿತ್ಯಭವಿಷ್ಯ..

ದಿನ ಪಂಚಾಂಗ....

SHARE......LIKE......COMMENT......

                  ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?

ದಿನ ಪಂಚಾಂಗ..
ದಿನ ವಿಶೇಷತೆ:
ಚತುರ್ದಶಿ ತಿಥಿ ಬುಧವಾರ ಪುಬ್ಬ ನಕ್ಷತ್ರ
 ರಾಹುಕಾಲ:- ಮಧ್ಯಾಹ್ನ 12 : 30 ರಿಂದ 02:01 ವರಿಗೆ
ಯಮಕಂಟಕ ಕಾಲ:-ಬೆಳಗ್ಗೆ 07:57 ರಿಂದ 09:28 ವರಿಗೆ
ಮೇಷ
ಅಧಿಕ ಶ್ರಮಕ್ಕೆ ತಕ್ಕಷ್ಟು ಆದಾಯವೂ ಬರುವುದರಿಂದ ಹಣಕಾಸಿನ ತೊಂದರೆ ಇರುವುದಿಲ್ಲ. ನೆರೆಹೊರೆಯವರೊಂದಿಗೆ ಸ್ನೇಹದಿಂದ ವರ್ತಿಸಿ.ವಿದೇಶ ಸಂಚಾರಕ್ಕೆ ಅವಕಾಶಗಳು ದೊರಕಲಿವೆ
ವೃಷಭ

ನೆರೆಹೊರೆಯರಲ್ಲಿ ಮನಸ್ತಾಪಕ್ಕೆ ಕಾರಣ ರಾಗದಿರಿ. ಬಾಡಿಗೆದಾರರಿಗೆ ಮನೆ ಬದಲಾವಣೆಯ ಸಾಧ್ಯತೆ ಇದೆ. ವಾಹನಗಳಿಗಾಗಿ ರಿಪೇರಿಯ ಖರ್ಚುಗಳು ಹೆಚ್ಚು ಇರುತ್ತೆ ,ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಮಿಥುನ

ಸರಕಾರಿ ಕೆಲಸದವರಿಗೆ ವರ್ಗಾವಣೆಯ ಸಾಧ್ಯತೆ ಇದೆ.ರಾಜಕೀಯ ದಲ್ಲಿ ಮುನ್ನಡೆ ತೋರಿ ಬಂದರೂ ಅಪವಾದ ಹೆಚ್ಚು,ಹೊಸ ಗೆಳೆತನದಿಂದ ಕಾರ್ಯಸಾಧನೆಯಾಗಲಿದೆ

ಕಟಕ

ರಿಪೇರಿ ಕೆಲಸಗಾರರಿಗೆ ಆದಾಯ ಹೆಚ್ಚಲಿದೆ.ಮಹತ್ತರ ಕೆಲಸವನ್ನು ಮುಂದಕ್ಕೆ ಹಾಕುವುದು ಒಳ್ಳೆಯದು. ಮಾನಸಿಕ ಖಿನ್ನತೆ ಮೂಡುವುದು. ಅಕ್ಕಿ ಮತ್ತು ಬೆಲ್ಲವನ್ನು ಹಸುವಿಗೆ ನೀಡಿ

 

ಸಿಂಹ

ಗೃಹ ನಿರ್ಮಾಣ ಕಾರ್ಯಗಳಿಗೆ ಇದು ಸಕಾಲ. ನ್ಯಾಯಾಲಯದ ಕೆಲಸಕಾರ್ಯಗಳಲ್ಲಿ ಯಶಸ್ಸು ,
ಉದ್ಯೋಗಿಗಳಿಗೆ ಇನ್ನೂ ಒಳ್ಳೆಯ ಅವಕಾಶವಿದೆ

ಕನ್ಯಾ

ಮದುವೆ ಪ್ರಯತ್ನ ಮಾಡುವವರಿಗೆ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ ಕಂಡು ಬರುವುದು.ಆರ್ಥಿಕ ಪರಿಸ್ಥಿತಿ ಸಾಧಾರಣವಿದ್ದು, ಖರ್ಚುಗಳು ಹೆಚ್ಚು

ತುಲಾ
ಮನೆಯಲ್ಲಿ ಮಂಗಳ ಕಾರ್ಯಗಳ ಬಗ್ಗೆ ಚರ್ಚೆ ನಡೆಯುವುದು ಹಾಗೂ ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ
ವೃಶ್ಚಿಕ

ಹೊಸ ಜವಾಬ್ದಾರಿಗಳು ದೊರೆಯುವ ಸಾಧ್ಯತೆ ಇದೆ. ನಿಮ್ಮ ಹಣಕಾಸು ಒಪ್ಪಂದಗಳ ವಿಷಯದಲ್ಲಿಜಾಗ್ರತೆಯಿಂದಿರಿ. ಆಸ್ತಿ ವಿಷಯದಲ್ಲಿ ಎಚ್ಚರವಹಿಸುವುದು ಸೂಕ್ತ.

ಧನಸ್ಸು

ಹೊಸ ವಾಹನ ಖರೀದಿಗೆ ಮುಂದಾಗುವಿರಿ. ಆದರೆ ಖರ್ಚುಗಳ ಬಗ್ಗೆ ಹಿಡಿತವಿರಲಿ.
ಕೆಲಸದ ಮೇಲೆ ವಿದೇಶ ಪ್ರಯಾಣ ಕೂಡ ಮಾಡುವ ಸಾಧ್ಯತೆಯಿರುತ್ತದೆ.

ಮಕರ

ಹಣಕಾಸಿನ ವಿಷಯದಲ್ಲಿ ಪ್ರಗತಿ ಕಂಡು ಬರುವುದು. ಮನೋಕಾಮನೆಗಳು ಪೂರ್ಣಗೊಳ್ಳುವುದು. ಆದರೆ ದೃಢ ಚಿತ್ತದಿಂದ ಕಾರ್ಯವನ್ನು ನಿರ್ವಹಿಸಬೇಕಾಗುವುದು.

ಕುಂಭ

ಹೊಸ ಕಾರ್ಯಕ್ರಮ ಅಥವಾ ಯೋಜನೆಗಳ ಅನುಷ್ಠಾನಕ್ಕೆ ಈ ದಿನ ನಿಮಗೆ ಅನುಕೂಲವಾಗಿದೆ. ವಾಹನ ಖರೀದಿ ಬಗ್ಗೆ ಚಿಂತಿಸುವಿರಿ.

ಮೀನ

ಸಿನಿಮಾ ಹಾಗೂ ವಜ್ರಾಭರಣ ವ್ಯಾಪಾರಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಹೆಚ್ಚು ಲಾಭ ದೊರೆಯುತ್ತದೆ.ರಾಜಕೀಯ ವ್ಯಕ್ತಿಗಳಿಗೆ ಹೆಚ್ಚಿನ ಅಭಿವೃದ್ಧಿ,ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ.