Breaking News

ತಾಪಂ ಮಾಜಿ ಸದಸ್ಯನಿಂದ ಅಕ್ರಮ ಮರಳು ಸಾಗಾಣೆ..!

ಪೋಲಿಸ್ ವರಿಷ್ಠಾಧಿಕಾರಿಗೆ ಸ್ಥಳಿಯರು ದೂರು....

SHARE......LIKE......COMMENT......

ಚಾಮರಾಜನಗರ:

ತಾಪಂ ಮಾಜಿ ಸದಸ್ಯ ಚಿಕ್ಕಮಾದೇಗೌಡ ಎಂಬವರ ವಿರುದ್ಧ ಅಕ್ರಮವಾಗಿ ಸಾಗಾಣಿಕೆ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ತಾಲೂಕಿನ ಹೊನ್ನಹಳ್ಳಿ ಬಳಿಯ ಎಲಚಕೆರೆ ಬಳಿಯ ಕಾಲುವೆಯಲ್ಲಿ ಶೇಖರಣೆಗೊಂಡಿರುವ ಮರಳನ್ನು ಅವ್ಯಾಹತವಾಗಿ ಸಾಗಿಸುತ್ತಿರುವ ಕುರಿತು ಸ್ಥಳೀಯರು ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎನ್ನಲಾಗಿದೆ.

KA-10 T-6766 ಸಂಖ್ಯೆಯ ಟ್ರ್ಯಾಕ್ಟರ್​ನಲ್ಲಿ ಭರ್ತಿ ಮರಳು ತುಂಬಿದ್ದು, ಟ್ರ್ಯಾಕ್ಟರ್ ಮೇಲೆ ಚಿಕ್ಕಮಾದೇಗೌಡ, ತಾಪಂ ಸದಸ್ಯರು ಎಂದು ಬರೆಯಲಾಗಿರುವ ವಿಡಿಯೋಗಳನ್ನು ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅಧಿಕಾರಿಗಳ ಜಾಣ ಕುರುಡನ್ನು ಪ್ರಶ್ನಿಸುತ್ತಿದ್ದಾರೆ.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಕಂದಾಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಮರಳು ಸಾಗಾಣೆಯನ್ನು ನಿಲ್ಲಿಸಬೇಕೆಂದು ಸ್ಥಳೀಯ ಯುವಕರು ಒತ್ತಾಯಿಸಿದ್ದಾರೆ…..