Breaking News

ನೌಕರರ ಮಾಸಿಕ ಭತ್ಯೆ ದುಪ್ಪಟ್ಟು..!

ಸಂಕ್ರಾಂತಿ ಉಡುಗೊರೆ ನೀಡಿದ ರಾಜ್ಯ ಸರ್ಕಾರ....

SHARE......LIKE......COMMENT......

ಬೆಂಗಳೂರು:

ಕೆಳಹಂತದ ನೌಕರರ ಭತ್ಯೆಯನ್ನು ದುಪ್ಪಟ್ಟು ಮಾಡಿ ಎಂದು ತೋಟಿ, ತಳವಾರ, ನೀರಗಂಟಿ, ವಾಲೀಕಾರ ಸನದಿ ಮತ್ತಿತರ ನೌಕರರು ಭತ್ಯೆಯನ್ನು ಹೆಚ್ಚಿಸುವಂತೆ ಹಲವು ವರ್ಷಗಳಿಂದ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದರು.

ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ನಿರ್ವಹಿಸುವ ಕೆಳಹಂತದ ನೌಕರರ ಅನುಕಂಪ ಭತ್ಯೆಯನ್ನು ಮಾಸಿಕ 800ರಿಂದ 1,600 ರೂ.ಗಳಿಗೆ ಹೆಚ್ಚಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದೇಶ ಹೊರಡಿಸುವ ಮೂಲಕ ರಾಜ್ಯ ಸರ್ಕಾರ ಸಂಕ್ರಾಂತಿ ಉಡುಗೊರೆ ನೀಡಿದೆ…….