Breaking News

‘ಬೆಳ್ಳಂದೂರು ಉಳಿಸಿ’ ಪ್ರತಿಭಟನೆ..!

ಸಾರ್ವಜನಿಕರ ಮಾನವ ಸರಪಳಿ ಹೋರಾಟ....

SHARE......LIKE......COMMENT......

ಕೃಷ್ಣರಾಜಪುರ:

ಬೆಳ್ಳಂದೂರು ವಾರ್ಡ್‌ನ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ಇಲ್ಲಿನ ನಾನಾ ಸಂಘಟನೆಗಳ ಸದಸ್ಯರು ಹಾಗೂ ಸಾರ್ವಜನಿಕರು ಶನಿವಾರ ಮಾನವ ಸರಪಳಿ ನಿರ್ಮಿಸಿ ಮೌನ ಪ್ರತಿಭಟನೆ ನಡೆಸಿದರು.

ಬೆಳ್ಳಂದೂರು ರಕ್ಷಿಸಿ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದ ಸಾರ್ವಜನಿಕರು ಸರ್ಜಾಪುರ ರಸ್ತೆಯ ಇಬ್ಬಲೂರಿನಿಂದ ಕಸವನಹಳ್ಳಿವರಗೂ ಮಾನವ ಸರಪಳಿ ನಿರ್ಮಿಸಿದರು.

ಬೆಳ್ಳಂದೂರು ವಾರ್ಡ್‌ನಿಂದ ವಾರ್ಷಿಕ 220 ಕೋಟಿ ರೂ. ಸಂಗ್ರಹವಾಗುತ್ತಿದೆ. ಆದರೆ, ಈ ಪ್ರದೇಶದ ಜನರಿಗೆ ಮೂಲ ಸೌಕರ್ಯವನ್ನೇ ಒದಗಿಸುತ್ತಿಲ್ಲ. ಟ್ರಾಫಿಕ್‌ ಕಿರಿಕಿರಿ, ಒಳಚರಂಡಿ ವ್ಯವಸ್ಥೆಯ ಕೊರತೆ, ಪಾದಚಾರಿ ಮಾರ್ಗ ಇಲ್ಲದಿರುವುದು ಸೇರಿದಂತೆ ನಾನಾ ಸಮಸ್ಯೆಗಳಿಂದ ಸಾರ್ವಜನಿಕರು ನಲುಗಿ ಹೋಗಿದ್ದಾರೆ. ವಾರ್ಡ್‌ನಲ್ಲಿ ಅನಿಯಮಿತ ಕಾಮಗಾರಿಯಿಂದಾಗಿ ಉಂಟಾಗುವ ಧೂಳಿನಿಂದಾಗಿ ಸಾರ್ವನಿಕರು ನಲುಗಿ ಹೋಗಿದ್ದಾರೆ,” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬೆಳ್ಳಂದೂರು ವಾರ್ಡ್‌ ಅಭಿವೃದ್ಧಿಗೆ 400 ಕೋಟಿ ರೂ. ವಿಶೇಷ ಪ್ಯಾಕೇಜ್‌ ನೀಡಬೇಕು. ಇಲ್ಲದಿದ್ದರೆ ಭಾರೀ ಪ್ರತಿಭಟನೆ ಮಾಡಲಾಗುವುದು,ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ದೊಡ್ಡಕನ್ನಲ್ಲಿ ರೈಸಿಂಗ್‌, ಕಸಮುಕ್ತ ಬೆಳ್ಳಂದೂರು, ಹರಳೂರು ಪೋರಂ ಸೇರಿದಂತೆ 9 ಸಂಘಟನೆಗಳ ಸದಸ್ಯರು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು……