Breaking News

#MeToo ಮೂಲಕ ದೇಶದ ಸಂಸ್ಕೃತಿ ನಾಶ​​..!

RSS ಮುಖಂಡ ಕಲಡ್ಕ ಪ್ರಭಾಕರ್​​ ಭಟ್ ಅಭಿಪ್ರಾಯ....

SHARE......LIKE......COMMENT......

ಹಾವೇರಿ:

#MeToo ಮೂಲಕ ದೇಶದ ಸಂಸ್ಕೃತಿಯನ್ನು ನಾಶಪಡಿಸುವಂತಹ ಒಂದು ಪ್ರಯತ್ನ ನಡೀತಾ ಇದೆ ಎಂದು ಆರ್​ಎಸ್​ಎಸ್​ ಮುಖಂಡ ಕಲಡ್ಕ ಪ್ರಭಾಕರ್​​ ಭಟ್ ಅಭಿಪ್ರಾಯಪಟ್ಟಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ಮೀ ಟೂ ಅಭಿಯಾನ ಒಳ್ಳೆಯದೇ. ಆದರೆ ಅದರ ದುರುಪಯೋಗವಾಗಿರುವ ಸಾಧ್ಯತೆ ಇದೆ ಎಂದರು. ಧಾರ್ಮಿಕ ನಂಬಿಕೆಗೆ ಯಾರು ಯಾರು ಬೆಂಬಲ ನೀಡುತ್ತಾರೋ ಅಂತವರನ್ನು ಬದಿಗೆ ಸರಿಸುವ ಎಲ್ಲಾ ಷಡ್ಯಂತ್ರಗಳು ನಡೆಯುತ್ತಿವೆ. ಈ ರೀತಿಯ ಷಡ್ಯಂತ್ರಗಳ ಹಿಂದೆ ಹಲವರ ಕೈವಾಡವಿದೆ ಎನ್ನುವ ಸಂಶಯ ವ್ಯಕ್ತಪಡಿಸಿದರು.

RSS ಸತ್ಯದ, ನ್ಯಾಯದ ಕಡೆ ಇದೆ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ಸಂಘ ಯಾವುದೇ ರೀತಿಯ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ಸಂಘದ ಸ್ವಯಂಸೇವಕ ವೈಯಕ್ತಿಕವಾಗಿ ಈ ರೀತಿಯ ಹೋರಾಟದಲ್ಲಿ ಭಾಗವಹಿಸಬಹುದು ಎಂದರು……