Breaking News

ನನ್ನ ಒಬ್ಬನೇ ಮಗನ ಮೇಲಾಣೆ ಸಾಲ ಮನ್ನಾ ಮಾಡುತ್ತೇನೆ..!

ರೈತರಿಗೆ ಮೋಸ ಮಾಡುವುದಿಲ್ಲ ಎಂದ ಹೆಚ್ ಡಿ ಕೆ....

SHARE......LIKE......COMMENT......

ಬಾಗಲಕೋಟೆ: 

ನನ್ನ ಒಬ್ಬನೇ ಮಗನ ಮೇಲೆ ಆಣೆ ಮಾಡಿ ಹೇಳುತ್ತೇನೆ… ಸಾಲ ಮನ್ನಾದ ವಿಚಾರದಲ್ಲಿ ನಾನು ರೈತರಿಗೆ ಮೋಸ ಮಾಡುವುದಿಲ್ಲ.” ಸಾಲ ಮನ್ನಾದ ವಿಚಾರದಲ್ಲಿ ಯಾರದ್ದೋ ಮಾತುಗಳಿಗೆ ಕಿವಿಗೊಡಬೇಡಿ. ಸಾಲ ಮನ್ನಾ ಮಾಡೇ ಮಾಡುತ್ತೇನೆ ಎಂದು ಸಿಎಂ ಎಚ್​.ಡಿ ಕುಮಾರಸ್ವಾಮಿ ಅವರು ಭಾವುಕರಾಗಿ ನುಡಿದಿದ್ದಾರೆ.

ರಾಜ್ಯದ ಅಲ್ಲಲ್ಲಿ ಕೇಳಿ ಬರುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳ ಕುರಿತು ಮಾತನಾಡಿದ ಅವರು, ಕೃಷಿ ಸಾಲ ಮನ್ನಾ ಮಾಡುವುದು ಶತಃಸಿದ್ಧ. ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಮನೆ ನಿರ್ಮಾಣಕ್ಕೆ, ಖಾಸಗಿ ಸಾಲಕ್ಕೆ ಯಾರೂ ಹೊಣೆಗಾರರಲ್ಲ. ಈ ವಿಚಾರವಾಗಿ ನಡೆಯುತ್ತಿರುವ ದುರ್ಘಟನೆಗಳು ಬೇಸರ ತರಿಸಿವೆ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದ ರೈತರು ಮಾಡಿರುವ ಕೃಷಿ ಸಾಲ ಮನ್ನಾ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಯಾವುದೇ ಭಾಗದಲ್ಲಿ ಬ್ಯಾಂಕ್​ ಅಧಿಕಾರಿಗಳು ಕೃಷಿ ಸಾಲ ಪಡೆದವರಿಗೆ ನೋಟಿಸ್​ ಕೊಟ್ಟರೆ ಬ್ಯಾಂಕ್​ ಅಧಿಕಾರಿ ಮತ್ತು ನೋಟಿಸ್​ ನೀಡಿದ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದೂ ಅವರು ತಿಳಿಸಿದರು……