Breaking News

ಕಂಡು ಕೇಳರಿಯದ ಮಳೆ ಆಂಧ್ರಪ್ರದೇಶ ತತ್ತರ..!

ಮರಣಮಳೆಗೆ ಇದುವರೆಗೂ 41 ಮಂದಿ ಮೃತ....

SHARE......LIKE......COMMENT......

ಆಂಧ್ರಪ್ರದೇಶ:

ಕಂಡು ಕೇಳರಿಯದ ರಣಮಳೆಗೆ ಆಂಧ್ರಪ್ರದೇಶ ತತ್ತರಿಸಿ ಹೋಗಿದೆ. ಮರಣಮಳೆಗೆ ಇದುವರೆಗೂ 41 ಮಂದಿ ಮೃತಪಟ್ಟಿದ್ದಾರೆ. ಮೃತ ಕುಟುಂಬಸ್ಥರಿಗೆ ಸಿಎಂ ಜಗನ್​​ ಮೋಹನ್​ ರೆಡ್ಡಿ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ತಿರುಪತಿ ತಿಮ್ಮಪ್ಪನಿಗೂ ಮಳೆರಾಯ ಜಲ ದಿಗ್ಭಂಧನ ಹಾಕಿದ್ದಾನೆ. ಭಾರೀ ಮಳೆಯಿಂದಾಗಿ ಸುಮಾರು 4 ಕೋಟಿಗೂ ಹೆಚ್ಚು ರೂಪಾಯಿ ನಷ್ಟ ಉಂಟಾಗಿದೆ. ಕಪಿಲತೀರ್ಥ, ಸ್ವರ್ಣಮುಖಿ ನದಿಗಳು ಉಕ್ಕಿ ಹರಿಯುತ್ತಿದ್ದು,ತಿರುಪತಿ ರಾವೂಲ ಚೆರವು ಡ್ಯಾಮ್​​​ ಸಂಪೂರ್ಣ ಭರ್ತಿಯಾಗಿ ಬಿರುಕು ಕಾಣಿಸಿಕೊಂಡಿದೆ. ಇದ್ರಿಂದ ಒಡೆಯೋ ಭೀತಿಗೆ ಸಿಲುಕಿದೆ. ಅಕ್ಕಪಕ್ಕದ ಗ್ರಾಮಸ್ಥರಿಗೆ ಸ್ಥಳಾಂತರ ಎಚ್ಚರಿಕೆ ನೀಡಲಾಗಿದೆ. ಚಿತ್ತೂರು, ಕಡಪ, ನೆಲ್ಲೂರು ಮತ್ತು ಅನಂತಪುರ ಜಿಲ್ಲೆಗಳು ಪ್ರವಾಹದ ಅಬ್ಬರಕ್ಕೆ ಅಕ್ಷರಹಃ ತತ್ತರಿಸಿವೆ…..