Breaking News

ಬೆಂಗಳೂರಿಗೆ ಎಂಟ್ರಿ ಕೊಡ್ತಿದೆ ಡೆಡ್ಲಿ ಗ್ಯಾಂಗ್..!

ಬ್ಯಾಂಕ್​ಗಳಿಗೆ, ಎಟಿಎಂಗಳಿಗೆ ಹೋಗಿ ಬರುವವರಿಗೆಯೇ ಟಾರ್ಗೆಟ್​....

SHARE......LIKE......COMMENT......

ಬೆಂಗಳೂರು:

ಸಿಲಿಕಾನ್​ ಜನರೇ ಹುಷಾರಾಗಿರಿ ಹಣ ಕ್ಯಾರಿ ಮಾಡುವಾಗ ಇದ್ದಕ್ಕಿದ್ದಂತೆ ನಿಮ್ಮ ಹಣ ಮಾಯವಾಗುತ್ತದೆ. ಯಾಕಂದ್ರೆ ಸಿಟಿಗೆ ಮತ್ತೆ ಎಂಟ್ರಿಯಾಗಿದ್ದಾರೆ ಓಜಿಕುಪ್ಪಂ ಗ್ಯಾಂಗ್​. ಕೆಲ ವರ್ಷಗಳ ಹಿಂದೆ ಬೆಂಗಳೂರು ಜನರ ನಿದ್ದೆ ಕೆಡಿಸಿದ್ದ ಓಜಿಕುಪ್ಪಂ ಗ್ಯಾಂಗ್​ವೊಂದು ಆಂಧ್ರದಿಂದ ರೈಲುಗಳ ಮೂಲಕ ನಗರಕ್ಕೆ ಎಂಟ್ರಿಯಾಗಿದ್ದಾರೆ. ಇವರು ರೈಲ್ವೇ ನಿಲ್ದಾಣದ ಆಸುಪಾಸಿನಲ್ಲಿ ವಾಸಮಾಡುತ್ತಿದ್ದು. ಜನರನ್ನು ಬೇರೆಡೆ ಆಕರ್ಷಸಿ ಬ್ಯಾಗ್​ನಲ್ಲಿದ್ದ ಅಮೂಲ್ಯ ವಸ್ತುಗಳನ್ನು ತೆಗೆಯುವುದರಲ್ಲಿ ಎತ್ತಿದ ಕೈ. ಅದರಲ್ಲೂ ಪ್ರಮುಖವಾಗಿ ಬ್ಯಾಂಕ್​ಗಳಿಗೆ, ಎಟಿಎಂಗಳಿಗೆ ಹೋಗಿ ಬರುವವರಿಗೆಯೇ ಟಾರ್ಗೆಟ್​ ಮಾಡುತ್ತಾರೆ. ಬೆಂಗಳೂರಿನ ಹಲವು ಠಾಣೆಗಳ ವ್ಯಾಪ್ತಿಯಲ್ಲಿ ಕೇಸ್​ ದಾಖಲಾಗಿ ಅರೆಸ್ಟ್​ ಆಗಿ ಜೈಲು ಸೇರಿದ್ದ ಈ ಗ್ಯಾಂಗ್​ ಈಗ ಬೇಲ್​ ಪಡೆದು ರಿಲೀಸ್​ ಆಗಿದ್ದಾರೆ. ಇದೀಗ ಬೆಂಗಳೂರಿನ ಜನರಿಗೆ ಮತ್ತೆ ಓಜಿ ಕುಪ್ಪಂ ಗ್ಯಾಂಗ್​ನಿಂದ ಎಚ್ಚರವಾಗಿರಬೇಕಾಗಿದೆ……