Breaking News

ಪ್ರೇತಭಾದೆ ನಿಮ್ಮನ್ನ ಬೆಂಬಿಡದೆ ಕಾಡುತ್ತಿದೇಯಾ..?

ರಾತ್ರಿ ಮಲಗುವ ಮುನ್ನ ಯಾವ ನಿಯಮಗಳನ್ನ ಪಾಲಿಸಿಬೇಕು....

SHARE......LIKE......COMMENT......

ಧರ್ಮ-ಜ್ಯೋತಿ:

ರಾತ್ರಿ ಅದೃಶ್ಯ ಶಕ್ತಿಗಳ ಪ್ರಭಾವ ಹೆಚ್ಚಿರುತ್ತೆ, ಶಾಸ್ತ್ರದಲ್ಲಿ ರಾತ್ರಿ- ಹಗಲಿಗೆ ಬೇರೆ ಬೇರೆ ನಿಯಮಗಳು ಜಾರಿಯಲ್ಲಿವೆ. ಈ ನಿಯಮಗಳ ಪ್ರಕಾರ ಜೀವನದಲ್ಲಿ ಬರುವ ಎಲ್ಲ ದುಃಖಗಳಿಗೆ ಮುಕ್ತಿ ಸಿಗುವ ಜೊತೆಗೆ ಯಶಸ್ಸು ಲಭಿಸುತ್ತದೆ. ಆಧುನಿಕ ಜಗತ್ತಿನಲ್ಲಿ ಜನರು ಶಾಸ್ತ್ರದ ಪ್ರಕಾರ ನಡೆಯುವುದಿಲ್ಲ. ಹಾಗಾಗಿ ಅವರ ಜೀವನದಲ್ಲಿ ದುಃಖ, ಅಸಫಲತೆ ಬರ್ತಾ ಇರುತ್ತೆ.

ಮಲಗುವ ಮುನ್ನ ಯಾವ ನಿಯಮಗಳನ್ನ ಪಾಲಿಸಿಬೇಕು?

ರಾತ್ರಿ ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹಾಗೆ ಮಾಡಿದಲ್ಲಿ ಜೀವನದಲ್ಲಿ ಬರುವ ಅನೇಕ ಕಷ್ಟಗಳು ದೂರವಾಗುತ್ತವೆ. ಸನಾತನ ಧರ್ಮದ ಪ್ರಕಾರ ರಾತ್ರಿ ಮಲಗುವ ಮುನ್ನ ಕೈ, ಕಾಲು ಹಾಗೂ ಮುಖವನ್ನು ತೊಳೆದು, ಬಟ್ಟೆಯಲ್ಲಿ ಒರೆಸಿಕೊಂಡು, ಭಗವಂತನ ಧ್ಯಾನ ಮಾಡ್ತಾ ಮಲಗಬೇಕು. ಹೀಗೆ ಮಾಡಿದ್ರೆ ರಾತ್ರಿ ಮಲಗಿದ ವೇಳೆ ನಾವೆಷ್ಟು ಬಾರಿ ಉಸಿರಾಡುತ್ತೇವೆಯೋ ಅಷ್ಟು ಬಾರಿ ದೇವರ ನಾಮ ಜಪಿಸಿದಂತಾಗುತ್ತದೆ.

ರಾತ್ರಿ ಹಾಸಿಗೆಗೆ ಹೋದ ತಕ್ಷಣ ಕಟ್ಟಿದ್ದ ಕೂದಲುಗಳನ್ನು ಬಿಚ್ಚಿ ಮಲಗುವ ಹವ್ಯಾಸ ಅನೇಕ ಮಹಿಳೆಯರಿಗಿರುತ್ತದೆ. ಪುರಾಣದ ಪ್ರಕಾರ ಬಿಚ್ಚಿದ ಕೂದಲು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.  ಹಾಗಾಗಿ ರಾತ್ರಿ ಮಲಗುವಾಗ ಕೂದಲನ್ನು ಕಟ್ಟಿ ಮಲಗಬೇಕು.

ಯಾವ ಯಾವ ಸ್ಥಳಗಳಿಗೆ ರಾತ್ರಿ ಹೋಗಬಾರದು?

ರಾತ್ರಿ ವೇಳೆ ಸ್ಮಶಾನಕ್ಕೆ ಅಥವಾ ಸ್ಮಶಾನದ ಕಡೆ ಹೋಗಬಾರದು. ಯಾವಾಗಲೂ ಅಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ಮುಸ್ಸಂಜೆಯ ನಂತ್ರ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುತ್ತದೆ. ಅದು ನಮ್ಮ ಆತ್ಮಸಾಕ್ಷಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗೆ ಸೂರ್ಯಾಸ್ತದ ನಂತ್ರ ಸ್ನಾನ ಮಾಡಬಾರದೆಂದು ಗ್ರಂಥಗಳಲ್ಲಿ ಹೇಳಲಾಗಿದೆ.

ರಾತ್ರಿ ಹೊತ್ತು ನಾಲ್ಕೈದು ರಸ್ತೆ ಕೂಡುವ ಜಾಗಕ್ಕೆ ಹೋಗಬಾರದು. ಪುರಾಣದ ಪ್ರಕಾರ ಅಲ್ಲಿ ರಾಹು ನೆಲೆಸಿರ್ತಾನೆ. ಅಪರಾಧ ಹಾಗೂ ತಪ್ಪುಗಳ ಮೂಲ ಕಾರಣ ರಾಹು. ಹಾಗೆ ಅಲ್ಲಿ ಭೂತ, ಪಿಶಾಚಿಗಳು ನೆಲೆಸಿರುತ್ತವೆ. ದುಷ್ಟಶಕ್ತಿಗಳ ವಾಸಸ್ಥಾನದಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುತ್ತದೆ. ರಾತ್ರಿ ಸಮಯ ಅನವಶ್ಯಕವಾಗಿ ಹೊರಗೆ ಹೋಗುವ ಬದಲು ಮನೆಯಲ್ಲಿರುವುದು ಒಳ್ಳೆಯದು.

ಯಾವ ಅಹಾರ ಸೇವಿಸಿದರೆ ನಿಮ್ಮ ಆಯಸ್ಸು ಕಡಿಮೆಯಾಗುತ್ತೆ?

ಮನುಷ್ಯನ ಆಯುಷ್ಯಕ್ಕೂ ಕೆಲವೊಂದು ಆಹಾರಕ್ಕೂ ನಂಟಿದೆ. ಯಾವ ಯಾವ ಆಹಾರವನ್ನು ಯಾವ ಸಮಯದಲ್ಲಿ ತಿಂದ್ರೆ ಆಯುಷ್ಯ ಕಡಿಮೆಯಾಗುತ್ತೆ ಎಂಬ ಬಗ್ಗೆ ನೀವೂ ತಿಳಿದುಕೊಳ್ಳಿ.

ಮೊಸರು: 

ಅನೇಕರಿಗೆ ಮೊಸರೆಂದ್ರೆ ಪ್ರಾಣ. ರಾತ್ರಿ ಊಟಕ್ಕೆ ಮೊಸರು ಸೇವಿಸೋದ್ರಿಂದ ಹೊಟ್ಟೆ ತಂಪಾಗಿರುತ್ತೆ ಎಂಬ ನಂಬಿಕೆ. ಗರುಡ ಪುರಾಣದ ಪ್ರಕಾರ ರಾತ್ರಿ ಮೊಸರು ಸೇವಿಸಿದ್ರೆ ನಮ್ಮ ಆಯುಷ್ಯ ಕಡಿಮೆಯಾಗುತ್ತಂತೆ. ಆಯುರ್ವೇದವೂ ಇದನ್ನೇ ಹೇಳುತ್ತೆ. ರಾತ್ರಿ ಊಟದ ನಂತರ ದೇಹಕ್ಕೆ ನಾವು ಅಷ್ಟು ಕೆಲಸ ಕೊಡುವುದಿಲ್ಲ. ಕೆಲವೇ ಗಂಟೆಗಳಲ್ಲಿ ನಿದ್ದೆಗೆ ಶರಣಾಗುತ್ತೇವೆ. ಆದ್ದರಿಂದ ಊಟ ಸರಿಯಾಗಿ ಜೀರ್ಣವಾಗುವುದಿಲ್ಲ. ಜೊತೆಗೆ ಮೊಸರು ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಅನೇಕ ರೋಗಗಳಿಗೆ ಕಾರಣವಾಗುತ್ತದೆ.

ಒಣ ಮಾಂಸ ಸೇವನೆ:

ಗರುಡ ಪುರಾಣದ ಪ್ರಕಾರ ಒಣ ಮಾಂಸ ಸೇವನೆಯಿಂದಲೂ ಆಯಸ್ಸು ಕಡಿಮೆಯಾಗುತ್ತದೆ. ಒಣ ಮಾಂಸವನ್ನು ಅನೇಕ ದಿನಗಳಿಂದ ಸಂಗ್ರಹಿಸಿ ಇಡುವುದರಿಂದ ಅದರಲ್ಲಿ ಬ್ಯಾಕ್ಟೀರಿಯಾ ಅಥವಾ ವೈರಸ್ ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಗರುಡ ಪುರಾಣದ ಪ್ರಕಾರ ಇದು ಕೂಡ ಆಯಸ್ಸನ್ನು ಕಡಿಮೆ ಮಾಡುತ್ತದೆ. ಮನುಷ್ಯನ ಶರೀರ ಬೆಂಕಿಯಲ್ಲಿ ಸುಡುವುದರಿಂದ ಆ ಶವದಲ್ಲಿರುವ ಬ್ಯಾಕ್ಟೀರಿಯಾ ಗಾಳಿಯಲ್ಲಿ ಸೇರಿ ನಮ್ಮ ಶರೀರ ಪ್ರವೇಶಿಸುತ್ತವೆ. ಇದರಿಂದ ನಮಗೂ ಅನೇಕಾನೇಕ ರೋಗ ಬರುವ ಸಾಧ್ಯತೆ ಇದೆ……


.