Breaking News

ದೇವಸ್ಥಾನ ಸುತ್ತ ಪ್ರದಕ್ಷಿಣೆ ಹಾಕುವುದರ ಮಹತ್ವವೇನು..?

ದೇವರನ್ನ ದೇವಾಲಯಗಳಲ್ಲಿ ದರ್ಶನ ಮಾಡಿದರೆ ಫುಣ್ಯ ಫಲಿಸುತ್ತಾ....

SHARE......LIKE......COMMENT......

ಧರ್ಮ-ಜ್ಯೋತಿ:

ನಾವೆಲ್ಲರೂ ಗುಡಿಗಳಿಗೆ, ದೇವಸ್ಥಾನಗಳಿಗೆ ಹೋಗಿಯೇ ಇರುತ್ತೇವೆ. ದೇವಸ್ಥಾನಗಳಿಗೆ ಯಾಕೆ ಭೇಟಿ ನೀಡುತ್ತೀರಿ ಎಂಬ ಪ್ರಶ್ನೆಗೆ ಹಲವಾರು ಉತ್ತರಗಳು ಸಿಗುತ್ತವೆ. ತಮ್ಮ ಅದ್ಭುತ ವಾಸ್ತುಶಿಲ್ಪದಿಂದಾಗಿ ಅಥವಾ ಸಂಸ್ಕೃತಿ ಸಂಪ್ರದಾಯಗಳಿಂದಾಗಿ ಅವು ನಿತ್ಯವೂ ದೇಶ-ವಿದೇಶಗಳಿಂದ ಭಕ್ತರನ್ನು, ಪ್ರವಾಸಿಗರನ್ನು ಆಕರ್ಷಿಸುತ್ತವೆ. ದೇವಸ್ಥಾನಗಳ ವಾಸ್ತುಶಿಲ್ಪದ ಬಗ್ಗೆ ವೇದಗಳಲ್ಲಿ ಉಲ್ಲೇಖವಿದೆ. ನಮ್ಮ ಬಹುತೇಕ ದೇವಸ್ಥಾನಗಳು ಕಟ್ಟಲ್ಪಟ್ಟಿರುವುದು ವೈಜ್ಞಾನಿಕತೆಯ ಆಧಾರದ ಮೇಲೆ. ದೇವಾಲಯದಲ್ಲಿ ನಾವು ಅನುಸರಿಸುವ ಪ್ರತಿ ಪದ್ಧತಿಗೂ ಅದರದ್ದೇ ಆದ ಅರ್ಥ ಇದೆ.

ದೇವಾಲಯಗಳನ್ನು ಕಟ್ಟಿರುವ ಸ್ಥಳ ಹಾಗೂ ಅದರ ರಚನೆ ಮಹತ್ವ

ದೇವಾಲಯಗಳನ್ನು ಹೆಚ್ಚಾಗಿ ಕಾಂತೀಯ ಹಾಗೂ ವಿದ್ಯುತ್ ತರಂಗಗಳು ಇರುವೆಡೆ ಕಟ್ಟಲಾಗುತ್ತದೆ. ಈ ತರಂಗಾಂತರಗಳು ದೇವಾಲಯದಲ್ಲಿ ಧನಾತ್ಮಕ ಶಕ್ತಿಯನ್ನು ಉತ್ಪತ್ತಿ ಮಾಡುತ್ತವೆ. ಇನ್ನು ದೇವರ ಮೂರ್ತಿಯನ್ನು ದೇವಸ್ಥಾನ ಇರುವ ಸ್ಥಳದ ಕೇಂದ್ರದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಇದನ್ನು ‘ಗರ್ಭಗಹ’ ಅಥವಾ ‘ಮೂಲಸ್ಥಾನ’ ಎನ್ನಲಾಗುತ್ತದೆ. ಈ ಭಾಗದಲ್ಲಿ ಕಾಂತೀಯ ಶಕ್ತಿ ಹೆಚ್ಚಾಗಿ ಕೇಂದ್ರಿತವಾಗಿರುತ್ತದೆ. ಇದೇ ಕಾರಣದಿಂದಾಗಿ ಗರ್ಭಗಹದಲ್ಲಿ ಧನಾತ್ಮಕ ಶಕ್ತಿ ಹೆಚ್ಚಿರುತ್ತದೆ.

ಚಪ್ಪಲಿ ಬಿಟ್ಟು ದೇವಾಲಯ ಪ್ರವೇಶಿಸುವ ಪದ್ಧತಿ ನಾವು ದೇವಾಲಯ ಪ್ರವೇಶಿಸುವಾಗ ಚಪ್ಪಲಿ ಹೊರಬಿಟ್ಟು ಒಳ ಪ್ರವೇಶಿಸುತ್ತೇವೆ. ಇದಕ್ಕೆ ಕಾರಣವೂ ಇದೆ; ದೇವಸ್ಥಾನಗಳನ್ನು ಕಾಂತೀಯ ಹಾಗೂ ವಿದ್ಯುತ್ ತರಂಗಗಳು ಹೆಚ್ಚಿರುವ ಸ್ಥಳದಲ್ಲಿ ನಿರ್ಮಿಸಲಾಗಿರುತ್ತದೆ. ಇದು ದೇವಸ್ಥಾನದಲ್ಲಿ ಧನಾತ್ಮಕ ಶಕ್ತಿ ಇರುವಂತೆ ಮಾಡುತ್ತದೆ. ಹಿಂದಿನ ಕಾಲದಲ್ಲಿ ಈ ದೇವಾಲಯದ ನೆಲಕ್ಕೆ ಬಳಸಲಾಗುವ ಹಾಸುಗಲ್ಲುಗಳನ್ನು ಸಹ ವೈಜ್ಞಾನಿಕತೆಯ ಆಧಾರದ ಮೇಲೆ ಆಯ್ಕೆ ಮಾಡುತ್ತಿದ್ದರು. ಮಧ್ಯ ಭಾಗದ ನೆಲ ಅಥವಾ ಹಾಸುಗಲ್ಲುಗಳು ಈ ಧನಾತ್ಮಕ ತರಂಗಾಂತರಗಳು ಪ್ರವಹಿಸುವಂತೆ ಮಾಡುತ್ತವೆ. ಹೀಗೆ ಪ್ರವಹಿಸಿದ ತರಂಗಗಳು (ಅಥವಾ ಧನಾತ್ಮಕ ಶಕ್ತಿ) ಬರಿಗಾಲಿನ ಮೂಲಕ ದೇಹವನ್ನು ಸೇರಿ ಶಕ್ತಿ ಸಂಚಯನಕ್ಕೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಚಪ್ಪಲಿ ಇಲ್ಲದೆಯೇ ದೇವಸ್ಥಾನವನ್ನು ಪ್ರವೇಶಿಸಲಾಗುತ್ತದೆ.

ದೇವರಿಗೆ ಬೆಳಗುವ ಕರ್ಪೂರದಾರತಿಯ ಮಹತ್ವ

ದೇವಾಲಯಗಳು ಯಾವಾಗಲೂ ದೀಪಾಲಂಕಾರಗಳಿಗೆ ಪ್ರಸಿದ್ಧ. ಅಲ್ಲಿ ನಡೆಯುವ ದೀಪೋತ್ಸವಗಳನ್ನು ನೋಡಲು ಕಣ್ಣೆರಡು ಸಾಲದು. ಆದರೆ ಹೆಚ್ಚಿನ ದೇವಸ್ಥಾನಗಳಲ್ಲಿ ದೇವರ ಮೂರ್ತಿ ಇರುವ ಗರ್ಭಗಹದಲ್ಲಿ ಕತ್ತಲೆ ಹೆಚ್ಚಿರುತ್ತದೆ. ಹಳೆಯ ಕಾಲದ ದೇವಾಲಯಗಳನ್ನು ಗಮನಿಸಿದರೆ, ಗರ್ಭಗಹದಲ್ಲಿ ಯಾವುದೇ ಕತಕ ಲೈಟಿಂಗ್ ವ್ಯವಸ್ಥೆಯಿರುವುದಿಲ್ಲ. ಕೇವಲ ಎಣ್ಣೆದೀಪ ಹಾಗೂ ಕರ್ಪೂರಗಳು ಅಲ್ಲಿ ಬೆಳಕಿನ ಆಕರ. ಇದಕ್ಕೆ ಮುಖ್ಯ ಕಾರಣವೆಂದರೆ ದಷ್ಟಿಯನ್ನು ಚುರುಕುಗೊಳಿಸುವುದು. ಕಣ್ಣು ಮುಚ್ಚಿ ಪ್ರಾರ್ಥಿಸಿ ತಕ್ಷಣಕ್ಕೆ ಕಣ್ಣು ತೆರೆದಾಗ ಅಲ್ಲಿರುವ ಕರ್ಪೂರದಾರತಿ, ಮಂಗಳಾರತಿಗಳು ದಷ್ಟಿಯು ಚುರುಕಾಗಿರುವಂತೆ ಮಾಡುತ್ತದೆ.

ದೇವಸ್ಥಾನದಲ್ಲಿ ಹೂಗಳನ್ನು ಅರ್ಪಿಸುವ ಪದ್ಧತಿಯ ಮಹತ್ವ

ಕೆಲವು ದೇವಸ್ಥಾನಗಳಲ್ಲಿ ನಿರ್ದಿಷ್ಟ ಹೂಗಳನ್ನು ಅರ್ಪಿಸುವ ಪರಿಪಾಠವಿರುತ್ತದೆ. ಗುಲಾಬಿ, ಕಮಲ, ಮಲ್ಲಿಗೆ, ದಾಸವಾಳ ಹೀಗೆ ಒಂದೊಂದು ದೇವರಿಗೆ ಒಂದೊಂದು ಹೂವು ಪ್ರಿಯವೆಂದು ಹೇಳಲಾಗುತ್ತದೆ. ಈ ಹೂಗಳ ಸುವಾಸನೆ, ಕರ್ಪೂರ, ಗಂಧದ ಕಡ್ಡಿ ಹಾಗೂ ಊದುಬತ್ತಿಗಳು ಒಟ್ಟಿಗೆ ಘ್ರಾಣ ಶಕ್ತಿಯನ್ನು ಕ್ರಿಯಾತ್ಮವಾಗಿರಿಸುತ್ತವೆ. ಜೊತೆಗೆ ಮನಸ್ಸನ್ನು ಶಾಂತವಾಗಿಸಲು ಸಹಕಾರಿಯಾಗುತ್ತವೆ.

ತೀರ್ಥ ಎಂಬ ಔಷಧಿಯ ವಿಶೇಷ

ದೇವಸ್ಥಾನದಲ್ಲಿ ಪೂಜೆಯ ನಂತರ ತೀರ್ಥವನ್ನು ನೀಡುತ್ತಾರೆ. ಪಚ್ಚ ಕರ್ಪೂರ, ತುಳಸಿದಳ ಮುಂತಾದ ಔಷಧೀಯ ಗುಣಗಳಿರುವ ತೀರ್ಥವನ್ನು ಸೇವಿಸುವುದೇ ಒಂದು ಆನಂದ. ಈ ನೀರನ್ನು ತಾಮ್ರದ ಪಾತ್ರೆಯಲ್ಲಿ ಕನಿಷ್ಠ ಪಕ್ಷ ಎಂಟು ಗಂಟೆಗಳ ಕಾಲ ಶೇಖರಿಸಿ ಇಟ್ಟಿರುತ್ತಾರೆ. ಆಯುರ್ವೇದದ ಪ್ರಕಾರ ತಾಮ್ರದ ಪಾತ್ರೆಯಲ್ಲಿ ಶೇಖರಿಸಿರುವ ತೀರ್ಥವು ವಾತ, ಪಿತ್ತ ಕಫ ಎಂಬ ತ್ರಿದೋಷಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ತುಳಸಿದಳವು ಜಿಹ್ವಾ ಶಕ್ತಿಯನ್ನು ಕ್ರಿಯಾತ್ಮಕವಾಗಿಡುತ್ತದೆ.

ಪ್ರದಕ್ಷಿಣೆ ನಮಸ್ಕಾರ

ಪೂಜಾ ವಿಧಿ ವಿಧಾನಗಳ ಬಳಿಕ ಗರ್ಭಗುಡಿಗೆ ಪ್ರದಕ್ಷಿಣೆ ಹಾಕಲಾಗುತ್ತದೆ. ಘಂಟಾನಾದ ಹಾಗೂ ಕರ್ಪೂರದಾರತಿಯಿಂದ ಬರುವ ಧನಾತ್ಮಕ ಶಕ್ತಿಯು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಮೂರ್ತಿಯಲ್ಲಿ ಸಂಚಯವಾಗುತ್ತದೆ. ಪ್ರದಕ್ಷಿಣಾಕಾರದಲ್ಲಿ ದೇವರ ಮೂರ್ತಿಗೆ ಸುತ್ತು ಬರುವಾಗ ಮನುಷ್ಯನ ಇಂದ್ರಿಯಗಳು ಈ ತರಂಗಾಂತರಗಳನ್ನು ಹೀರಿಕೊಳ್ಳುತ್ತದೆ ಎಂದು ವೇದವಿಜ್ಞಾನ ಹೇಳುತ್ತದೆ.

ಕುಂಕುಮ ಅಥವಾ ತಿಲಕ

ಮನುಷ್ಯನ ಹಣೆಯಲ್ಲಿ ಹುಬ್ಬುಗಳ ಮಧ್ಯಭಾಗದ ಪ್ರದೇಶವು ದೇಹದ ಮುಖ್ಯ ಕೇಂದ್ರ. ಹಣೆಯ ಈ ಭಾಗದಲ್ಲಿ ಕುಂಕುಮ ಇಟ್ಟುಕೊಳ್ಳುವುದರಿಂದ ಶಕ್ತಿ ನಷ್ಟವಾಗುವುದನ್ನು ತಡೆಯಬಹುದು. ಕುಂಕುಮ ದೇಹದಲ್ಲಿ ಶಕ್ತಿ ಸಂಚಯವಾಗಲು ಹಾಗೂ ಏಕಾಗ್ರತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗೆಯೇ ಕುಂಕುಮ ಹಚ್ಚುವ ಸಮಯದಲ್ಲಿ ದೇಹದ ಆಜ್ಞಾಚಕ್ರ ಸ್ಪರ್ಶಿತವಾಗುತ್ತದೆ. ಈ ಪ್ರಕ್ರಿಯೆಯು ಮುಖಕ್ಕೆ ರಕ್ತಸಂಚಾರ ಹೆಚ್ಚುವಂತೆ ಮಾಡುತ್ತದೆ. ಇದೇ ಕಾರಣಕ್ಕೆ ಹಿಂದೂ ಸಂಪ್ರದಾಯಗಳಲ್ಲಿ ಕುಂಕುಮಕ್ಕೆ ಬಹಳ ಪ್ರಾಮುಖ್ಯತೆಯಿದೆ.

ತೆಂಗಿನಕಾಯಿ ಹಾಗೂ ಬಾಳೆಹಣ್ಣನ್ನು ನೈವೇದ್ಯಕ್ಕೇಕೆ ಅರ್ಪಿಸಬೇಕು?

ತೆಂಗು ಮತ್ತು ಬಾಳೆ ಫಲಗಳನ್ನು ನಮ್ಮ ಸಂಸ್ಕೃತಿಯಲ್ಲಿ ಪವಿತ್ರವೆಂದು ಪರಿಗಣಿಸಲಾಗಿದೆ. ತೆಂಗನ್ನು ಬೆಳೆಯಬೇಕೆಂದರೆ ಪೂರ್ತಿ ಕಾಯಿಯನ್ನು ಬಿತ್ತಬೇಕು ಮತ್ತು ಬಾಳೆಯನ್ನು ಸ್ಯಾಂಪ್ಲಿಂಗ್ ವಿಧಾನದ ಮೂಲಕ ಬೆಳೆಸಲಾಗುವುದು. ಇನ್ನು ಈ ತೆಂಗಿನ ಚಿಪ್ಪು ಹಾಗೂ ಬಾಳೆಹಣ್ಣಿನ ಸಿಪ್ಪೆಯನ್ನು ಬೇರೆ ಕೆಲಸಕ್ಕೆ ಬಳಸುವುದಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಅವುಗಳನ್ನು ಪೂಜೆಗೆ ಪವಿತ್ರವೆಂದು ಪರಿಭಾವಿಸಿ ನೈವೇದ್ಯಕ್ಕೆ ಬಳಸಲಾಗುತ್ತದೆ.

ಕರ್ಪೂರದಾರತಿಯನ್ನು ಕಣ್ಣಿಗೊತ್ತಿಕೊಳ್ಳುವುದೇಕೆ?

ದೇವಸ್ಥಾನದಲ್ಲಿ ಕರ್ಪೂರದಾರತಿಯನ್ನು ನೀಡಿದಾಗ ಕಣ್ಣಿಗೊತ್ತಿಕೊಳ್ಳುವುದು ವಾಡಿಕೆ. ಆರತಿಯಿಂದ ಬಿಸಿಯಾದ ಕೈಗಳನ್ನು ಕಣ್ಣುಗಳಿಗೆ ಸ್ಪರ್ಶಿಸುವುದರಿಂದ ಸ್ಪರ್ಶಜ್ಞಾನ ಕ್ರಿಯಾತ್ಮಕವಾಗಿರುತ್ತದೆ. ಪಂಚೇಂದ್ರಿಯಗಳು ಜಾಗತವಾಗುವಿಕೆ ದೇವಸ್ಥಾನದಲ್ಲಿ ಪಾಲಿಸುವ ವಿವಿಧ ಪದ್ಧತಿಗಳಿಂದ ಮನುಷ್ಯನ ಪಂಚೇಂದ್ರಿಯಗಳು ಜಾಗತವಾಗುತ್ತವೆ……