Breaking News

ಹುಂಡಿಯಲ್ಲಿ ಬರೀ ಕಾಗದದ ತುಂಡುಗಳು…!

‘ಸೇವ್‌ ಶಬರಿಮಲೆ’ಗೆ ಭಾರಿ ಬೆಂಬಲ.......

SHARE......LIKE......COMMENT......

ಕೇರಳ:

ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಶಬರಿಮಲೆಯ ಕಾಣಿಕೆ ಹುಂಡಿಯಲ್ಲಿ ಹಣದ ಬದಲು ಅಯ್ಯಪ್ಪ ಭಕ್ತರು ‘ಸೇವ್‌ ಶಬರಿಮಲೆ’, ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಬರೆದು ಹಾಕಿರುವ ಕಾಗದಗಳೇ ಹೆಚ್ಚಿನ ಪ್ರಮಾಣದಲ್ಲಿವೆ.

ಸುಪ್ರೀಂ ಕೋರ್ಟ್‌ ತೀರ್ಪು ಬಂದ ಕೂಡಲೇ ದೇವಸ್ವಂ ಮಂಡಳಿ ಅಧೀನದಲ್ಲಿರುವ ಕ್ಷೇತ್ರಗಳಲ್ಲಿ ಕಾಣಿಕೆ ಹಾಕದಂತೆ ವ್ಯಾಪಕ ಪ್ರಚಾರ ನಡೆಸಲಾಗಿತ್ತು. ಕ್ಷೇತ್ರಗಳಲ್ಲಿ ಬರುವ ಆದಾಯವನ್ನು ಸರ್ಕಾರ ದರೋಡೆ ಮಾಡುತ್ತಿರುವುದಾಗಿ ಪ್ರಚಾರ ನಡೆದಿತ್ತು.

ಇನ್ನು ತುಲಾ ಮಾಸದ ಪೂಜೆ ಅವಧಿಯಲ್ಲಿ ಸಂಗ್ರಹವಾದ ಕಾಣಿಕೆಯೂ ಕಳೆದ ವರ್ಷಕ್ಕಿಂತ ಗಣನೀಯವಾಗಿ ಕುಸಿದಿದೆ. ದರ್ಶನ ಆರಂಭಗೊಂಡ ಅ.17ರಿಂದ ನಾಲ್ಕು ದಿನಗಳ ಆದಾಯವು ಕಳೆದ ವರ್ಷಕ್ಕಿಂತ ಇಳಿಕೆಯಾಗಿದೆ. ಕಳೆದ ವರ್ಷದ ತುಲಾ ಮಾಸ ಪೂಜೆಯ ಮೊದಲ ದಿನವೇ 8.42ಲಕ್ಷ ರೂ. ಕಾಣಿಕೆ ಬಂದಿದ್ದರೆ, ಈ ಬಾರಿ 4.83ಲಕ್ಷ ರೂ. ಮಾತ್ರ ಸಂದಾಯವಾಗಿದೆ.

ಎರಡನೇ ದಿನ 19.30ಲಕ್ಷ ರೂ. ಬಂದಿದೆ. ಕಳೆದ ವರ್ಷ 45.59ಲಕ್ಷ ರೂ. ಸಂಗ್ರಹವಾಗಿತ್ತು. ಮೂರನೇ ದಿನ 17.51ಲಕ್ಷ ರೂ. ಕಾಣಿಕೆ ಬಂದಿದೆ. ಕಳೆದ ವರ್ಷ ಅದು 32.30ಲಕ್ಷ ರೂ.ಗಳಾಗಿದ್ದು, ಇದರಲ್ಲಿ 14.79ಲಕ್ಷ ಇಳಿಕೆಯಾಗಿದೆ. ನಾಲ್ಕನೇ ದಿನ ಶನಿವಾರ ಮಾತ್ರ ಕಳೆದ ವರ್ಷಕ್ಕಿಂದ 15,800 ರೂ. ಅಧಿಕ ಬಂದಿದೆ…..