Breaking News

12-JAN-2019 ನಿತ್ಯಭವಿಷ್ಯ..

ದಿನ ಪಂಚಾಂಗ....

SHARE......LIKE......COMMENT......

                  ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?

ದಿನ ಪಂಚಾಂಗ..
ಶುಕ್ಲ ಪಕ್ಷ ಸಪ್ತಮಿ ತಿಥಿ, ಶನಿವಾರ,ಉತ್ತರಭಾದ್ರ  ನಕ್ಷತ್ರ
ರಾಹುಕಾಲ :- ಬೆಳಿಗ್ಗೆ 09:38 ರಿಂದ 11:03 ವರಿಗೆ
ಯಮಕಂಟಕ ಕಾಲ:- ಮಧ್ಯಾಹ್ನ 01:52 ರಿಂದ 03:17 ವರಿಗೆ
ಗುಳಿಕ ಕಾಲ:- ಬೆಳಿಗ್ಗೆ 06:48 ರಿಂದ  08:13 AM ವರಿಗೆ
ಮೇಷ

ವೃತ್ತಿಯಲ್ಲಿ ಸಮಾಧಾನಕರ ವಾತಾವರಣವಿರುತ್ತದೆ. ಬಿಡುವಿನ ದಿನದ ಸದುಪಯೋಗಪಡಿಸಿಕೊಳ್ಳುವಿರಿ. ದಂಪತಿಗಳು ಸರಸಮಯ ಕ್ಷಣಗಳನ್ನು ಕಳೆಯುವರು.
ಶುಭಸಂಖ್ಯೆ: 2

ವೃಷಭ

ಅನಿರೀಕ್ಷಿತವಾಗಿ ಬಂಧುಮಿತ್ರರ ಆಗಮನವಾಗಲಿದೆ. ಮಿತ್ರರ ಜತೆಗೆ ಪ್ರವಾಸ ಕೈಗೊಳ್ಳುವಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಲಿದೆ.
ಶುಭಸಂಖ್ಯೆ: 6

ಮಿಥುನ

ಅವಿವಾಹಿತರಿಗೆ ಹೊಸ ವಿವಾಹ ಪ್ರಸ್ತಾಪಗಳು ಬಂದರೂ ಮನಸ್ಸಿಗೆ ಹಿತವೆನಿಸುವ ಸಂಬಂಧವಾಗಿರದು. ಪ್ರೇಮಿಗಳೂ ಮನೆಯವರ ವಿರೋಧ ಕಟ್ಟಿಕೊಳ್ಳಬೇಕಾದೀತು. ದೇವರ ಪ್ರಾರ್ಥನೆ ಮಾಡಿ

ಶುಭಸಂಖ್ಯೆ: 8

ಕಟಕ

ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಶುಭ ಕಾರ್ಯ ಮಾಡಲು ಸೂಕ್ತ ಸಮಯವಲ್ಲ. ಆರ್ಥಿಕವಾಗಿ ಅಡಚಣೆ, ಅವಮಾನ, ಅಪವಾದಕ್ಕೆ ಗುರಿಯಾಗಬೇಕಾದೀತು.
ಶುಭಸಂಖ್ಯೆ: 4

ಸಿಂಹ

ಆದಾಯ ಧಾರಾಳವಾಗಿರುತ್ತದೆ. ಆದರೆ ಅಷ್ಟೇ ಖರ್ಚುವೆಚ್ಚಗಳೂ ಇದ್ದು ಉಳಿತಾಯ ಕಾಣಲಾರಿರಿ. ಯಾರೊಂದಿಗೆ ವ್ಯವಹಾರ ಮಾಡುವುದಿದ್ದರೂ ಎಚ್ಚರಿಕೆ ಅಗತ್ಯ. ಉದ್ಯೋಗದಲ್ಲಿ ಕೊಂಚ ಹಿನ್ನಡೆ ಅನುಭವಿಸಬೇಕಾದೀತು.
ಶುಭಸಂಖ್ಯೆ: 1

ಕನ್ಯಾ

ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ಅರಸಿ ಬರಲಿವೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಉದಾಸೀನತೆ ಕಂಡುಬಂದೀತು. ಖರ್ಚು ವೆಚ್ಚಗಳಿಗೆ ಕಡಿವಾಣವಿರಲಿ. ಕೈಗೊಳ್ಳುವ ಕೆಲಸಗಳಲ್ಲಿ ಅಡವಣೆ ಉಂಟಾಗುವುದನ್ನು ತಪ್ಪಿಸಲು ದೇವರ ಪ್ರಾರ್ಥನೆ ಮಾಡಿ.
ಶುಭಸಂಖ್ಯೆ: 9

ತುಲಾ

ಮಾನಸಿಕವಾಗಿ ಯಾವುದೋ ಚಿಂತೆ ನಿಮ್ಮನ್ನು ಕಾಡಲಿದೆ. ಧನಲಾಭ ಯೋಗವಿದೆ. ಹೊಸ ವಸ್ತುಗಳ ಖರೀದಿ ಮಾಡುವಿರಿ. ಆದರೆ ದಾಯಾದಿಗಳಿಂದ ವಂಚನೆಗೊಳಗಾಗುವ ಸಾಧ‍್ಯತೆಯಿದೆ.
ಶುಭಸಂಖ್ಯೆ: 7

ವೃಶ್ಚಿಕ

ಇದುವರೆಗೆ ನಿಮ್ಮನ್ನು ಬಾಧಿಸುತ್ತಿದ್ದ ಆರ್ಥಿಕ ಅಡಚಣೆ ನಿಧಾನವಾಗಿ ದೂರವಾಗುವುದು. ಉದ್ಯೋಗದಲ್ಲಿ ಮುನ್ನಡೆ ಸಾಧಿಸುವಿರಿ. ವಾಹನ ಖರೀದಿ ಯೋಗವಿದೆ. ಆದರೆ ನಷ್ಟ ಅನುಭವಿಸುವ ಸಾಧ್ಯತೆಯೂ ಇದೆ.
ಶುಭಸಂಖ್ಯೆ: 2

ಧನಸ್ಸು

ಪ್ರಯತ್ನವಿದ್ದಲ್ಲಿ ಯಾವುದೇ ಕೆಲಸಗಳೂ ನೆರವೇರುವುದು. ಆರೋಗ್ಯದಲ್ಲಿ ತುಸು ಚೇತರಿಕೆ ಕಂಡುಬರುವುದು. ಹಾಗಿದ್ದರೂ ಮಾನಸಿಕ ಚಿಂತೆ ತಪ್ಪಿದ್ದಲ್ಲ. ದಿನದಂತ್ಯಕ್ಕೆ ಶುಭ ಸುದ್ದಿ.
ಶುಭಸಂಖ್ಯೆ: 3

ಮಕರ

ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಕೆಲಸ ಹಾಳುಗೆಡವಬೇಡಿ. ಕೆಲವೊಮ್ಮೆ ಸ್ವಾಭಿಮಾನ ಮರೆಯಬೇಕು. ತಾಳ್ಮೆಯಿಂದ ಮುನ್ನಡೆದರೆ ಅಭಿವೃದ್ಧಿ ಕಾಣುವಿರಿ. ಕುಟುಂಬದಲ್ಲೂ ಸಮಾಧಾನದಿಂದ ವ್ಯವಹರಿಸಿ.
ಶುಭಸಂಖ್ಯೆ: 8

ಕುಂಭ

ಕೈಗೊಂಡ ವ್ಯವಹಾರದಲ್ಲಿ ನಿವ್ವಳ ಲಾಭವಾಗಿ ಸಂತಸ ಮೂಡುವುದು. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ. ಉದ್ಯೋಗಿಗಳಿಗೆ ಬಡ್ತಿ. ಆರ್ಥಿಕವಾಗಿ ಮುನ್ನಡೆ.
ಶುಭಸಂಖ್ಯೆ: 2

ಮೀನ

ಹಿತಶತ್ರುಗಳ ಕಾಟದಿಂದ ಮನಸ್ಸಿಗೆ ಕಿರಿ ಕಿರಿ. ಉದ್ಯೋಗಿಗಳಿಗೆ ಕಾರ್ಯದೊತ್ತಡವಿರುವುದು. ಕ್ರೀಡಾಳುಗಳಿಗೆ ಯಶಸ್ಸು. ಆರೋಗ್ಯ ಕೊಂಚ ಹದ ತಪ್ಪುವುದು.
ಶುಭಸಂಖ್ಯೆ: 7