Breaking News

ಧಾರವಾಡದ ಕಟ್ಟಡ ಕುಸಿತ ಪ್ರಕರಣ..!

ಸಾವಿನ ಸಂಖ್ಯೆ 15ಕ್ಕೆ ಏರಿಕೆ....

SHARE......LIKE......COMMENT......

ಧಾರವಾಡ:

ಧಾರವಾಡದ ಕಟ್ಟಡ ಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಕಟ್ಟಡದ ಅವಶೇಷದಡಿ ಇನ್ನೂ ಹತ್ತಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ.ಎನ್​ಡಿಆರ್​​​ಎಫ್​,SDRF, ಅಗ್ನಿ ಶಾಮಕ ದಳ ಮತ್ತು ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.ನಾಲ್ಕನೇ ದಿನವೂ ಅವಶೇಷಗಳಡಿ ಸಿಲುಕಿದವರಿಗೆ ಶೋಧ ಕಾರ್ಯ ನಡೆಯುತ್ತಿದೆ.

ಈ ಮಧ್ಯೆ ದುರಂತ ಸಂಬಂಧ ಎಫ್​ಐಆರ್​​ನಲ್ಲಿ ದಾಖಲಾಗಿದ್ದ ಆರು ಆರೋಪಿಗಳ ಪೈಕಿ ನಾಲ್ವರು ಉಪನಗರ ಪೊಲೀಸರಿಗೆ ಶರಣಾಗಿದ್ದಾರೆ.ಈಗಾಗಲೇ ಪೊಲೀಸರು ಎಂಜಿನಿಯರ್​​​​​​​​​​ ವಿವೇಕ್​​​ ಪವಾರ್​​ನನ್ನು ಬಂಧಿಸಿದ್ದಾರೆ. ಮಾಜಿ ಸಚಿವ ವಿನಯ್​ ಕುಲಕರ್ಣಿ ಮಾವ ಗಂಗಣ್ಣ ಶಿಂತ್ರಿ, ರವಿ ಸಬರದ್, ಬಸವರಾಜ ನಿಗದಿ, ಮಹಾಬಳೇಶ್ವರ ಪುರದಗುಡಿ ಉಪನಗರ ಪೋಲಿಸರಿಗೆ ಶರಣಾಗಿದ್ದಾರೆ……