Breaking News

ನಾನೊಬ್ಬ ಹಠವಾದಿ ಎಂದ್ರು ಎಚ್​.ಡಿ.ದೇವೇಗೌಡ್ರು..!

ನೆಮ್ಮದಿಯ ಅಂತ್ಯ ಕಾಣಲು ಬಯಸುತ್ತೇನೆ....

SHARE......LIKE......COMMENT......
ರಾಮನಗರ:
ಎಚ್​.ಡಿ.ಕುಮಾರಸ್ವಾಮಿ ತಮ್ಮ ಕ್ಷೇತ್ರವನ್ನು ಕೈ ಬಿಡುವುದಿಲ್ಲ. ಯಾರೇನೇ ಆರೋಪ ಮಾಡಿದರೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ಹೇಳಿದರು.ಹಳ್ಳಿಮಾಳ ಗ್ರಾಮದಲ್ಲಿ ಅನಿತಾ ಕುಮಾರಸ್ವಾಮಿ ಪರ ಪ್ರಚಾರ ನಡೆಸಿ, ಬಿಜೆಪಿ ವಿರುದ್ಧ ಹೋರಾಡಲು ಒಂದಾಗಿದ್ದೇವೆ. ಅ.31 ಅಥವಾ ನ.1ರಂದು ದೊಡ್ಡಮಟ್ಟದ ಬಹಿರಂಗ ಸಭೆ ನಡೆಸುವ ಆಸೆ ಇದೆ ಎಂದರು.

ರೇಷ್ಮೆ ಸೇರಿ ಹಲವು ಬೆಳೆಗಳ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏರುಪೇರಾಗಿದೆ. ಸರ್ಕಾರದ ಕೆಲವು ಭಾವನೆಗಳು ಜನರ ಪರವಾಗಿದೆ ಎಂದು ನಾನೂ ಹೇಳುವುದಿಲ್ಲ. ಕುಮಾರಸ್ವಾಮಿಗೆ ಮುಖ್ಯಮಂತ್ರಿ ಆಗುವುದು ಅನಿವಾರ್ಯ ಆಗಿರಲಿಲ್ಲ. ನಂಜನಗೂಡು ಉಪಚುನಾವಣೆಯಲ್ಲಿ ಜೆಡಿಎಸ್​ ಅಭ್ಯರ್ಥಿ ಸೋತಿದ್ದರು. ಕಾಂಗ್ರೆಸ್​ ಗೆಲ್ಲಲಿ ಎಂದು ಅಭ್ಯರ್ಥಿ ಹಾಕದಂತೆ ಎಚ್​.ಡಿ.ಕುಮಾರಸ್ವಾಮಿಗೆ ತಿಳಿಸಿದ್ದೆ ಎಂದರು.

ನಾನೊಬ್ಬ ಹಠವಾದಿ. ಅಂದುಕೊಂಡಿದ್ದನ್ನು ಮಾಡುತ್ತೇನೆ. ನೆಮ್ಮದಿಯ ಅಂತ್ಯ ಕಾಣಬೇಕಾಗಿದೆ. ಮಾಡಬೇಕಾದ ಕೆಲಸಗಳು ತುಂಬ ಇವೆ. ಕಾಂಗ್ರೆಸ್​, ಜೆಡಿಎಸ್​ ಹೊಂದಾಣಿಕೆ ಆಗಿದೆ. ನಾವು ನಮ್ಮ ಹಗೆತನವನ್ನು ಮರೆಯಬೇಕು. ನಾನು ಉದ್ವೇಗದ ಭಾಷಣ ಮಾಡುವುದಿಲ್ಲ. ವ್ಯಕ್ತಿ ನಿಂದನೆಯನ್ನೂ ಮಾಡುವುದಿಲ್ಲ. ಮೈತ್ರಿ ಸರ್ಕಾರದ ಬಗ್ಗೆ ಮಾತನಾಡಲು ಬಂದಿದ್ದೇನೆ ಎಂದರು….