Breaking News

ಲೋಕಸಭೆ ಚುನಾವಣೆ ನಂತರ ಸಿಎಂ ಕುಮಾರಸ್ವಾಮಿ ರಿಲ್ಯಾಕ್ಸ್​ ಮೂಡ್..!​​

ಪಂಚಕರ್ಮ ಚಿಕಿತ್ಸೆಗೆ ನಂತರ ಬೆಂಗಳೂರಿಗೆ ಆಗಮನ....

SHARE......LIKE......COMMENT......

ಉಡುಪಿ:

ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಬ್ಯುಸಿಯಾಗಿ ಬಳಲಿರೋ ಸಿಎಂ ಕುಮಾರಸ್ವಾಮಿ ಅವರು ರಿಲ್ಯಾಕ್ಸ್​ ಮೂಡ್​​ಗೆ ಜಾರಿದ್ದಾರೆ. ಉಡುಪಿಯ ಹೆಲ್ತ್ ರಿಸಾರ್ಟ್​​ಗೆ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ್ದು, ಕಾಪುವಿನ ಮೂಳೂರಿನಲ್ಲಿರುವ ಸಾಯಿ ರಾಧಾ ರಿಸಾರ್ಟ್​​ನಲ್ಲೇ ನಾಲ್ಕೈದು ದಿನ ತಂಗುವ ಸಾಧ್ಯತೆ ಇದೆ. ಕಳೆದ ಭಾನುವಾರ ಸಿಎಂ ಕುಮಾರಸ್ವಾಮಿ ಚುನಾವಣಾ ಪ್ರಚಾರ ಮುಗಿಸಿಕೊಂಡು ಎರಡು ದಿನ‌ ಇದೇ ರೆಸಾರ್ಟ್​ನಲ್ಲಿ ತಂಗಿದ್ದರು. ಪ್ರಾಥಮಿಕ ಚಿಕಿತ್ಸೆ ಪೂರೈಸಿ ವಾರದ ನಂತರ ಬರುವುದಾಗಿ ತಿಳಿಸಿದ್ದರು. ಅಂತೆಯೇ ಪುನಃ ಪಂಚಕರ್ಮ ಚಿಕಿತ್ಸೆಗೆ ಆಗಮಿಸಿದ್ದಾರೆ……