Breaking News

ಲೋಕಸಭಾ ಚುನಾವಣೆ ಪ್ರಚಾರ ಇಂದು ತ್ರಾಸಿಗೆ ಸಿಎಂ ಕುಮಾರಸ್ವಾಮಿ..!

ಕೊಂಕಣಿ ಖಾರ್ವಿ ಸಮುದಾಯ ಭವನದಲ್ಲಿ ಪ್ರಚಾರ ಸಭೆ....

SHARE......LIKE......COMMENT......

ಗಂಗೊಳ್ಳಿ:

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅ.30ರಂದು ತ್ರಾಸಿಗೆ ಭೇಟಿ ನೀಡಲಿದ್ದು, ಕೊಂಕಣಿ ಖಾರ್ವಿ ಸಮುದಾಯ ಭವನದಲ್ಲಿ ಶಿವಮೊಗ್ಗ ಲೋಕಸಭಾ ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಬೆಳಗ್ಗೆ 9.30ಕ್ಕೆ ಅರೆಶಿರೂರು ಹೆಲಿಪ್ಯಾಡ್‌ಗೆ ಆಗಮಿಸಲಿರುವ ಮುಖ್ಯಮಂತ್ರಿ, 10 ಗಂಟೆಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ದರ್ಶನ ಪಡೆಯಲಿದ್ದಾರೆ. ಮೈತ್ರಿ ಪಕ್ಷಗಳ ಅಭ್ಯರ್ಥಿ ಮಧು ಬಂಗಾರಪ್ಪ ಪರ 12 ಗಂಟೆಗೆ ತ್ರಾಸಿಯಲ್ಲಿ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ ಮಾಜಿ ಶಾಸಕ ಗೋಪಾಲ ಪೂಜಾರಿಯವರ ಮನೆಯಲ್ಲಿ ಭೋಜನ ಸ್ವೀಕರಿಸಿ ಶಿವಮೊಗ್ಗಕ್ಕೆ ಪ್ರಯಾಣಿಸಲಿದ್ದಾರೆ.

ತ್ರಾಸಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಎಡಿಷನಲ್ ಎಸ್ಪಿ ಕುಮಾರಚಂದ್ರ, ಸಮುದಾಯ ಭವನದ ಭದ್ರತೆ ಪರಿಶೀಲಿಸಿ, ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ಸಿಎಂ ಭೇಟಿಯ ಭದ್ರತೆಗಾಗಿ ಇಬ್ಬರು ಡಿವೈಎಸ್‌ಪಿ, ಆರು ಇನ್ಸ್‌ಪೆಕ್ಟರ್, 10 ಸಬ್ ಇನ್ಸ್‌ಪೆಕ್ಟರ್‌ಗಳು ಹಾಗೂ ಸುಮಾರು 170 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು…..