Breaking News

ಸಂಕ್ರಾತಿ ಹಬ್ಬಕ್ಕೆ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಗಿಫ್ಟ್..!

ಕನಕಪುರ ಮುಖ್ಯರಸ್ತೆಯ ಯಲಚೇನಹಳ್ಳಿ-ನೈಸ್‌ ರಸ್ತೆವರೆಗಿನ ಮಾರ್ಗದಲ್ಲಿ ಮೆಟ್ರೊ ಸವಾರಿ....

SHARE......LIKE......COMMENT......

ಬೆಂಗಳೂರು:

ಮೆಟ್ರೋ ಪ್ರಯಾಣಿಕರಿಗೆ ಸಂಕ್ರಾಂತಿ ಹಬ್ಬಕ್ಕೆ ಹೊಸ ಗುಡ್​ ನ್ಯೂಸ್​ ಕೊಟ್ಟಿದೆ. ನಮ್ಮ ಮೆಟ್ರೊ ಎರಡನೇ ಹಂತದ ಕನಕಪುರ ಮುಖ್ಯರಸ್ತೆಯ ಯಲಚೇನಹಳ್ಳಿ-ನೈಸ್‌ ರಸ್ತೆವರೆಗಿನ ಮಾರ್ಗದಲ್ಲಿ ಸಂಕ್ರಾಂತಿ ಹಬ್ಬದ ದಿನದಿಂದ ಮೆಟ್ರೊ ರೈಲಿನ ಸವಾರಿ ಆರಂಭವಾಗಲಿದೆ. ಈ ಮಾರ್ಗ 6 ಕಿಲೋಮೀಟರ್ ಉದ್ದವಿದ್ದು 6 ನಿಲ್ದಾಣಗಳನ್ನ ಹೊಂದಿದೆ. ಯಲಚೇನಹಳ್ಳಿ, ಕೋಣನಕುಂಟೆ ಕ್ರಾಸ್, ದೊಟ್ಟಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ, ಅಂಜನಾಪುರ ಮಾರ್ಗದಲ್ಲಿ ಹೊಸ ರೈಲು ಸಂಚಾರ ಆರಂಭಿಸಲಿದೆ. ಈ ಮಾರ್ಗವನ್ನು ಜ. 14ರಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಉದ್ಘಾಟಿಸಲಿದ್ದು, ಜನವರಿ15ರಿಂದ ವಾಣಿಜ್ಯ ಸಂಚಾರ ಶುರುವಾಗಲಿದೆ……