Breaking News

ಲಾಲೂ ಪ್ರಸಾದ್‌ಗೆ ​ ಪುತ್ರಿಯೇ ಮೂತ್ರಪಿಂಡ ದಾನ…!

ಸಿಂಗಾಪುರದಲ್ಲಿ ಕಿಡ್ನಿ ಕಸಿ ಚಿಕಿತ್ಸೆ ಯಶಸ್ವಿ....

SHARE......LIKE......COMMENT......

ನವದೆಹಲಿ:

ಆರ್​​​ಜೆಡಿ ಪರಮೋಚ್ಚ ನಾಯಕ ಲಾಲೂ ಪ್ರಸಾದ್​ ಯಾದವ್​ ಅವ್ರಿಗೆ ಪುತ್ರಿಯೇ ಮೂತ್ರಪಿಂಡ ದಾನ ಮಾಡಿದ್ದಾರೆ. ಹಿರಿಯ ಪುತ್ರಿ ರೋಹಿಣಿ ಆಚಾರ್ಯ ಮೂತ್ರಪಿಂಡ ನೀಡಿದ್ದು, ಕಿಡ್ನಿ ಕಸಿ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಅಪ್ಪ-ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಸಿಂಗಾಪುರ ವೈದ್ಯರು ಮಾಹಿತಿ ನೀಡಿದ್ದಾರೆ. ಐಸಿಯುನಿಂದ ಇಬ್ಬರನ್ನೂ ಸ್ಪೆಷಲ್​ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ ಎಂದು ಲಾಲೂ ಪುತ್ರ, ಬಿಹಾರ ಡಿಸಿಎಂ ತೇಜಸ್ವಿಯಾದವ್​ ತಿಳಿಸಿದ್ದಾರೆ. ಮೌಂಟ್​ ಎಲೆಜಬೆತ್​ ಆಸ್ಪತ್ರೆಯಲ್ಲಿ ಲಾಲೂ ಅವರನ್ನು ದಾಖಲು ಮಾಡಲಾಗಿದೆ. ಮೂತ್ರಪಿಂಡ ವೈಫಲ್ಯದಿಂದಾಗಿ ಲಾಲೂ ಪ್ರಸಾದ್ ಯಾದವ್​ ಅಸ್ವಸ್ಥರಾಗಿದ್ದರು.ಎಂಟು ಮಕ್ಕಳಲ್ಲಿ ಲಾಲೂ ಅವರಿಗೆ ರೋಹಿಣಿ ಅಂದ್ರೆ ತುಂಬಾ ಇಷ್ಟ ಹೀಗಾಗಿ ಪ್ರೀತಿ ಪಾತ್ರ ಅಪ್ಪನಿಗೆ ಮಗಳೇ ಮೂತ್ರಪಿಂಡ ದಾನಿಯಾದ್ರು..