ಹಾವೇರಿ:
#MeToo ಮೂಲಕ ದೇಶದ ಸಂಸ್ಕೃತಿಯನ್ನು ನಾಶಪಡಿಸುವಂತಹ ಒಂದು ಪ್ರಯತ್ನ ನಡೀತಾ ಇದೆ ಎಂದು ಆರ್ಎಸ್ಎಸ್ ಮುಖಂಡ ಕಲಡ್ಕ ಪ್ರಭಾಕರ್ ಭಟ್ ಅಭಿಪ್ರಾಯಪಟ್ಟಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಮೀ ಟೂ ಅಭಿಯಾನ ಒಳ್ಳೆಯದೇ. ಆದರೆ ಅದರ ದುರುಪಯೋಗವಾಗಿರುವ ಸಾಧ್ಯತೆ ಇದೆ ಎಂದರು. ಧಾರ್ಮಿಕ ನಂಬಿಕೆಗೆ ಯಾರು ಯಾರು ಬೆಂಬಲ ನೀಡುತ್ತಾರೋ ಅಂತವರನ್ನು ಬದಿಗೆ ಸರಿಸುವ ಎಲ್ಲಾ ಷಡ್ಯಂತ್ರಗಳು ನಡೆಯುತ್ತಿವೆ. ಈ ರೀತಿಯ ಷಡ್ಯಂತ್ರಗಳ ಹಿಂದೆ ಹಲವರ ಕೈವಾಡವಿದೆ ಎನ್ನುವ ಸಂಶಯ ವ್ಯಕ್ತಪಡಿಸಿದರು.
RSS ಸತ್ಯದ, ನ್ಯಾಯದ ಕಡೆ ಇದೆ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ಸಂಘ ಯಾವುದೇ ರೀತಿಯ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ಸಂಘದ ಸ್ವಯಂಸೇವಕ ವೈಯಕ್ತಿಕವಾಗಿ ಈ ರೀತಿಯ ಹೋರಾಟದಲ್ಲಿ ಭಾಗವಹಿಸಬಹುದು ಎಂದರು……