Breaking News

17-APR-2019 ನಿತ್ಯಭವಿಷ್ಯ..

ದಿನ ಪಂಚಾಂಗ....

SHARE......LIKE......COMMENT......

                  ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?

ದಿನ ಪಂಚಾಂಗ..
ದಿನ ವಿಶೇಷತೆ:
ತ್ರಯೋದಶಿ ತಿಥಿ ಬುಧವಾರ ಉತ್ತರ ನಕ್ಷತ್ರ
 ರಾಹುಕಾಲ:- ಮಧ್ಯಾಹ್ನ 12:22 to 01:56 ವರಿಗೆ
ಯಮಕಂಟಕ ಕಾಲ:-: ಬೆಳಗ್ಗೆ 07:43 to 09:16ವರಿಗೆ
ಮೇಷ
ಮನಸ್ಸಿಗೆ ಒತ್ತಡ ನೀಡುವ ಕೆಲಸದತ್ತ ಗಮನ ಹರಿಸದಿರಿ. ಹಣಕಾಸಿನ ವಿಷಯದಲ್ಲಿ ಜಾಗ್ರತೆಯಿರಲಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಉಂಟಾಗುವುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು.
ವೃಷಭ

ಈ ದಿನ ಸಂತೋಷದ ಕ್ಷ ಣಗಳನ್ನು ಕಳೆಯುವಿರಿ. ಒಳ್ಳೆಯ ಸುದ್ದಿಗಳು ಇಂದು ನಿಮಗೆ ಸಂತಸವನ್ನು ತಂದು ಕೊಡುವವು. ಹಣದ ವಿಚಾರದಲ್ಲಿ ಜಾಗ್ರತರಾಗಿರಿ.

ಮಿಥುನ

ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭಾಂಶ ಕಂಡುಬರುವುದು. ಮನೋಕಾಮನೆಗಳು ಪೂರ್ಣಗೊಳ್ಳುವವು. ಕೌಟುಂಬಿಕವಾಗಿಯೂ ಸಂತಸದ ಕ್ಷ ಣಗಳನ್ನು ಅನುಭವಿಸುವಿರಿ

ಕಟಕ

ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.ನಿಮ್ಮ ಕೆಲಸದಲ್ಲಿ ಮೇಲಾಧಿಕಾರಿಗಳಿಂದ ಅನುಕೂಲ,ಮನೆಯಲ್ಲಿ ಮಡದಿ ಮಕ್ಕಳ ಮೇಲೆ ಪ್ರೀತಿ ವಿಶ್ವಾಸ ತೋರಿ.

 

ಸಿಂಹ

ಕೆಲಸದ ಒತ್ತಡ ಮತ್ತು ಹೊಸ ಜವಾಬ್ದಾರಿಗಳು ನಿಮಗೆ ಒತ್ತಡ ಉಂಟು ಮಾಡುವುದು. ಸ್ನೇಹಿತರ ಬೆಂಬಲ ನಿಮಗಿರುವುದು. ಹಣಕಾಸಿನ ಪರಿಸ್ಥಿತಿಯು ಉತ್ತಮಗೊಳ್ಳುವುದು

ಕನ್ಯಾ

ಈ ದಿನದ ಯಾವುದೇ ಕೆಲಸ ಕಾರ್ಯಗಳಲ್ಲಿ ಎಷ್ಟು ಎಚ್ಚರಿಕೆಯಿಂದ ಇರುತ್ತೀರೋ ಅಷ್ಟು ನಿಮಗೆ ಒಳ್ಳೆಯದು. ಸೋದರರೊಂದಿಗಿನ ಬಾಂಧವ್ಯ ಮರು ಹೊಂದಾಣಿಕೆ ಆಗುವ ಸಾಧ್ಯತೆಯಿದೆ. ಹಣಕಾಸಿನ ಸ್ಥಿತಿ ಉತ್ತಮವಿರುವುದು

ತುಲಾ
ನೂತನ ಯೋಜನೆಗಳಿಂದ ಬದುಕಿಗೆ ಹೊಸ ಆಯಾಮ ದೊರೆಯಲಿದೆ. ಕಾರ್ಯಗಳಲ್ಲಿ ಗೆಲುವು ಕಾಣುವುದು. ಆರ್ಥಿಕ ಸ್ಥಿತಿ ಉತ್ತಮವಿರುವುದು.

ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ
ವೃಶ್ಚಿಕ

ಗಟ್ಟಿ ಮನೋಭಾವ ಬೆಳೆಸಿಕೊಳ್ಳಿರಿ. ಮನೋರಂಜನೆಗಾಗಿ ಯೋಚಿಸುವ ಸಮಯವಿದು. ಹೂಡಿಕೆ ವಿಷಯದಲ್ಲಿ ಲಾಭವಾಗಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುವುದು.

ಧನಸ್ಸು

ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರುವುದು. ಹೆಚ್ಚು ಪೂಜೆ ಪುನಸ್ಕಾರಗಳಲ್ಲಿ ಸಮಯ ಕಳೆಯುವುದು ,ಆರ್ಥಿಕ ಸ್ಥಿತಿ ಉತ್ತಮವಿರುವುದು

ಮಕರ

ಮದುವೆ ಅಥವಾ ಶುಭ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ಸ್ನೇಹಿತರು ಸಕಾಲದಲ್ಲಿ ಹಣಕಾಸಿನ ವಿಷಯವಾಗಿ ಸಹಾಯ ಮಾಡುವರು. ಆರೋಗ್ಯ ಉತ್ತಮವಿರುವುದು

ಕುಂಭ

ಹಣಕಾಸು ವ್ಯವಹಾರಗಳಲ್ಲಿ ನಿಮ್ಮ ಪ್ರಯತ್ನಗಳು ಸಫಲವಾಗುತ್ತವೆ. ಸಾಮಾಜಿಕ ಮತ್ತು ರಾಜಕೀಯವಾಗಿ ಹೆಸರು ಗಳಿಸುವಿರಿ. ಕೌಟುಂಬಿಕ ಜೀವನ ಉತ್ತಮವಿರುವುದು.

ಮೀನ

ಮಾಡುವ ಕೆಲಸ ಕಾರ್ಯಗಳಲ್ಲಿ ತಾಳ್ಮೆಯಿಂದಿರಿ. ವೃತ್ತಿ ರಂಗದಲ್ಲಿ ಯಶಸ್ಸನ್ನು ಹೊಂದುವಿರಿ. ಆರೋಗ್ಯದ ಕಡೆ ಗಮನವಿರಲಿ. ಪ್ರಯಾಣದಲ್ಲಿ ಎಚ್ಚರವಿರಲಿ