Breaking News

ಬಿಬಿಎಂಪಿ ಮೇಯರ್​​ಗಾಗಿ ಗದ್ದುಗೆ ಗುದ್ದಾಟ…!?

ಪಟ್ಟಕ್ಕಾಗಿ ಆಪರೇಷನ್ ಬಿಜೆಪಿ ಶುರು....

SHARE......LIKE......COMMENT......

ಬೆಂಗಳೂರು:

ಆಪರೇಷನ್​​ ಕಮಲ ಮೂಲಕ ರಾಜ್ಯದಲ್ಲಿ ಅಧಿಕಾರ ಸಾಧಿಸಿರೋ ಬಿಜೆಪಿ ಬಿಬಿಎಂಪಿ ಮೇಯರ್​ ಗದ್ದುಗೆಗೆ ಕಣ್ಣಿಟ್ಟಿದೆ. ಸೆ.27 ರಂದು ನಡೆಯಲಿರುವ ಮೇಯರ್ ಚುನಾವಣೆ ಗೆಲ್ಲಲೇ ಬೇಕೆಂದು ಪಣತೊಟ್ಟಿರೋ ಬಿಜೆಪಿ ಬಿಬಿಎಂಪಿಯಲ್ಲೂ ರೆಸಾರ್ಟ್ ರಾಜಕಾರಣವನ್ನು ಶುರುಮಾಡಿದೆ ಎನ್ನಲಾಗ್ತಿದೆ. ಈಗಾಗಲೇ ಬಿಜೆಪಿ ನಾಯಕರು ಹಲವು ಸದಸ್ಯರನ್ನ ಗೋವಾಗೆ ಕರೆದೊಯ್ದಿದ್ದಾರೆ. ಪಕ್ಷೇತರ ಸದಸ್ಯರಾದ ಲಕ್ಷ್ಮೀ ನಾರಾಯಣ, ಆನಂದ್, ರಮೇಶ್​​, ಗಾಯತ್ರಿಗೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಗಾಳ ಹಾಕಿದ್ದಾರೆ. ಇನ್ನು ನಾಲ್ವರು ಪಕ್ಷೇತರ ಸದಸ್ಯರ ಮೊಬೈಲ್​​ಗಳು ಸ್ವಿಚ್​​ ಆಫ್​​ ಆಗಿದ್ದು, ಶತಾಯ-ಗತಾಯ ಪಾಲಿಕೆ ಗದ್ದುಗೆ ಏರಲು ಬಿಜೆಪಿ ಪ್ರಯತ್ನಿಸುತ್ತಿದೆ……