Breaking News

ಉಪ-ಸಮರ ಗೆಲ್ಲಲು ಕೈ-ಕಮಲ ಭಾರಿ ಕಸರತ್ತು..!

ಕ್ಷೇತ್ರಕ್ಕೆ ಓರ್ವ ಸಚಿವ ಸೇರಿ ಇಬ್ಬರು ಶಾಸಕರ ಉಸ್ತುವಾರಿ....

SHARE......LIKE......COMMENT......

ಚಿಂಚೋಳಿ:

ಚಿಂಚೋಳಿ ವಿಧಾನಸಭಾ ಉಪ-ಸಮರ ಗೆಲ್ಲಲು ಕೈ-ಕಮಲ ನಡುವೆ ಕಸರತ್ತು ಮುಂದುವರೆದಿದೆ. ಚಿಂಚೋಳಿ ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಓರ್ವ ಸಚಿವ ಸೇರಿ ಇಬ್ಬರು ಶಾಸಕರನ್ನ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಚುನಾವಣಾ ಉಸ್ತುವಾರಿ ಡಾ.ಜಿ ಪರಮೇಶ್ವರ್​ ನಿರ್ದೇಶನದಂತೆ ಸಚಿವರಾದ ಬಂಡೆಪ್ಪ ಕಾಶಂಪುರ್, ಪ್ರಿಯಾಂಕ್​​ ಖರ್ಗೆ, ರಾಜಶೇಖರ್ ಪಾಟೀಲ್​​ ನೇತೃತ್ವದ ತಂಡವನ್ನು ನೇಮಿಸಿದೆ. ಕಾಂಗ್ರೆಸ್​ ತಂತ್ರಕ್ಕೆ ಕಮಲ ನಾಯಕರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಕಮಲ ಪಾಳೆಯ ಮಾಜಿ ಸಚಿವ ವಿ ಸೋಮಣ್ಣ, ಲಕ್ಷ್ಮಣ ಸವದಿ, ಶಾಸಕರಾದ ರಾಜುಗೌಡ, ದತ್ತಾತ್ರೇಯ ಪಾಟೀಲ್ ಸೇರಿದಂತೆ ಹಲವು ಶಾಸಕರನ್ನು ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ನೇಮಿಸಿದೆ……