Breaking News

ನಾನು ಸರ್ಜಾ ಪರ ನಿಲ್ಲುತ್ತೇನೆ: ಪ್ರಮೋದ್​​ ಮುತಾಲಿಕ್​​​​

ಕ್ರಿಶ್ಚಿಯನ್ ಮಿಷನರಿಗಳ ಕೈವಾಡವಿದೆ.....

SHARE......LIKE......COMMENT......

ದಾವಣಗೆರೆ:

ಸ್ಯಾಂಡಲ್​ವುಡ್​ನಲ್ಲಿ ಬಿರುಗಾಳಿ ಎಬ್ಬಿಸಿರುವ ನಟ ಅರ್ಜುನ್ ಸರ್ಜಾ ಮತ್ತು ನಟಿ ಶೃತಿ ಹರಿಹರನ್ ನಡುವಿನ ಮೀ ಟೂ ವಾರ್ ಬಗ್ಗೆ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ.

ಮೀ ಟೂ ಆರೋಪ ಎದುರಿಸುತ್ತಿರುವ ನಟ ಅರ್ಜುನ್ ಸರ್ಜಾ ಪರ ನಾನು ನಿಲ್ಲುತ್ತೇನೆ. ಈ ಪ್ರಕರಣದಲ್ಲಿ ಅವರು ನಿರ್ದೋಷಿ ಎಂದು ನನಗನಿಸುತ್ತಿದೆ. ಇಂಥ ಸಭ್ಯ ನಟನ ಮೇಲೆ ಆಪಾದನೆ ಸರಿಯಲ್ಲ. ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ನೀಡುವಂಥ ವ್ಯಕ್ತಿ ಅಲ್ಲ. ನಾನು ಅವರನ್ನು ಚೆನ್ನಾಗಿ ಬಲ್ಲೆ. ಸರ್ಜಾ ಪರ ಕೇಳಿ ತಿಳಿದುಕೊಂಡಿದ್ದೇನೆ. ಯಾರದ್ದೋ ಮಾತು ಕೇಳಿಕೊಂಡು ಹಾಗೂ ಆಮಿಷಕ್ಕೊಳಗಾಗಿ ಶೃತಿ ಹರಿಹರನ್ ಈ ರೀತಿಯ ಆರೋಪ ಮಾಡಿದ್ದಾರೆ ಎಂದು ದೂರಿದರು.

ಮೀ ಟೂ ಅಭಿಯಾನ ನೊಂದ ಮಹಿಳೆಯರ ಪರ ಇದೆ. ಇದಕ್ಕೆ ನನ್ನ ಬೆಂಬಲ ಇದೆ. ಆದ್ರೆ, ಶೃತಿ ಹರಿಹರನ್ ಮೀ ಟೂ ವಿಚಾರದಲ್ಲಿ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಆರೋಪ ಸರಿಯಲ್ಲ. ಅರ್ಜುನ್ ಸರ್ಜಾ ಅಂಥ ವ್ಯಕ್ತಿ ಅಲ್ಲ. ಕ್ರಿಶ್ಚಿಯನ್ ಮಿಷನರಿಗಳ ಕುತಂತ್ರದ ಫಲವಾಗಿ ಶೃತಿ ಹರಿಹರನ್ ಆರೋಪ ಮಾಡುತ್ತಿದ್ದಾರೆ. ಅರ್ಜುನ್ ಸರ್ಜಾಗೆ ನ್ಯಾಯ ಸಿಗಬೇಕು. ಅಮೆರಿಕಾದಿಂದ ಶೃತಿ ಹರಿಹರನ್​ಗೆ ಹಣ ಸಂದಾಯವಾಗಿರೋದು ಸತ್ಯವಿರಬಹುದು. ಹಿಂದೂ ಸಮಾಜ, ಹಿಂದೂ ಮುಖಂಡರು, ಹಿಂದುತ್ವದ ಮೇಲೆ ದಾಳಿ ನಡೆಯುತ್ತಲೇ ಇದೆ. ಇದರ ಹಿಂದೆ ಕ್ರಿಶ್ಚಿಯನ್ ಮಿಷನರಿಗಳ ಕೈವಾಡವಿದೆ ಎಂದು ಮುತಾಲಿಕ್​ ಆರೋಪಿಸಿದ್ದಾರೆ……